ಭಟ್ಕಳ: ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಬಾಜಾರ ಶಾಖೆಯ ಸಸ್ಪೆನ್ಸ್ ಸಿಸ್ಟಮ್ ಖಾತೆಯಿಂದ ಕೋಟ್ಯಾಂತರ ರೂಪಾಯಿ ಹಣ ಲಪಟಾಯಿಸಿರುವ ಪ್ರಕರಣಕ್ಕೆ ಸಂಬoಧಿಸಿದoತೆ ತಲೆ ಮರೆಸಿಕೊಂಡಿರುವ ಅಂದಿನ ಶಾಖಾ ವ್ಯವಸ್ಥಾಪಕ ಅನೂಪ್ ಪೈ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಹೊರಡಿಸಿದ್ದಾರೆ. ಪ್ರಕಟಣೆ
ಬ್ಯಾಂಕಿನ ಸಸ್ಪೆನ್ಸ್ ಸಿಸ್ಟಮ್ ಖಾತೆಯ ಪಾಸ್ವರ್ಡ ವ್ಯವಸ್ಥಾ ಪಕರಿಗೆ ಮಾತ್ರ ನೀಡಲಾಗುತ್ತಿದ್ದು,
ಅಲ್ಲಿಂದ ಭಾರೀ ಮೊತ್ತದ ಹಣವನ್ನು ಖಾಸಗಿ ಖಾತೆಗೆ ವರ್ಗಾಯಿಸಿರುವುದು. ಕಳೆದ ಮಾರ್ಚ ತಿಂಗಳ ಲೆಕ್ಕಪರಿಶೋ ಧನಾ ವರದಿಯಲ್ಲಿ ತಿಳಿಸಲಾಗಿತ್ತು.
ಆರೋಪಿಯು 2019ರಿಂದಲೇ ನಿಯಮಬಾಹೀರವಾಗಿ ಈ ಸಸ್ಪೆನ್ಸ್ ಖಾತೆಯಿಂದ ಭಾರೀ ಮೊತ್ತದ ಹಣವನ್ನು ಖಾಸಗಿ ಖಾತೆಗೆ ವರ್ಗಾಯಿಸುತ್ತ ಬಂದಿದ್ದ ಬಗ್ಗೆ ಆರೋಪಿಸಲಾಗಿದ್ದು, ಈ ಲಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಯು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆತನ ಬಗ್ಗೆ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ ಠಾಣೆಯನ್ನು ಸಂಪರ್ಕಿಸುವoತೆ ಪ್ರಕಟಣೆ ಹೊರಡಿಸಿದ್ದಾರೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.