ಕುಮಟಾ ; ಕರ್ನಾಟಕ ಸರಕಾರದ ನೃತ್ಯ ಸಂಗೀತ ಅಕಾಡೆಮಿ ಬೆಂಗಳೂರು ಇವರು ಧಾರವಾಡದಲ್ಲಿ ಜರುಗಿಸಿದ ಶಿಷ್ಯವೇತನದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕು.ಪಲ್ಲವಿ ಗಾಯತ್ರಿ ಭರತನಾಟ್ಯ ವಿಭಾಗದಲ್ಲಿ ಶಿಷ್ಯವೇತನಕ್ಕೆ ಆಯ್ಕೆಯಾಗಿರುತ್ತಾಳೆ.
ಗೋಕರ್ಣ ಮೂಲದ ಕುಮಟಾದ ಶ್ರೀಮತಿ ಲಕ್ಮೀ ಮತ್ತು ಶ್ರೀ ಗೋಪಾಲ ಗಾಯತ್ರಿ ದಂಪತಿಗಳ ಮಗಳಾದ ಇವಳು ಪ್ರಥಮ ಬಿಎಸ್ಸಿ ಪದವಿ ಯಲ್ಲಿ ಓದುತ್ತಿದ್ದು ಭರತನಾಟ್ಯದಲ್ಲಿ ವಿದ್ವತ್ ಪಾಠವನ್ನು ಕಲಿಯುತ್ತಿದ್ದಾಳೆ. ನಾದಶ್ರೀ ಕಲಾಕೇಂದ್ರದಲ್ಲಿ ಶಿಕ್ಷಕಿ ವಿದೂಷಿ ನಯನಾ ಪ್ರಸನ್ನ ಇವರಲ್ಲಿ ಸತತ ೧೩ ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಇವಳ ಈ ಸಾಧನೆಗೆ ಪಾಲಕರು,ಕುಮಟಾ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನೃತ್ಯ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.