ಭಟ್ಕಳ: ಹೊಳೆಗೆ ಬಲೆ ಬೀಸಲು ಹೋಗಿದ್ದ ಮೀನುಗಾರರೋರ್ವರ ಶವವು ಬಲೆಯ ಉರುಳು ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಇಲ್ಲಿನ ಬೆಳಕೆ ಮೊಗೇರಕೇರಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಇಲ್ಲಿನ ಬೆಳಕೆ ಕೆಳಗಿನಮನೆ ನಿವಾಸಿ ಮಂಜುನಾಥ ವೆಂಕ್ಷ ಮೊಗೇರ (62) ಎಂದು ಗುರುತಿಸಲಾಗಿದೆ.
ಹೊಳೆಯ ನಡುವೆ ಮೀನಿಗೆ ಬಲೆ ಬೀಸುವಾಗ ಆಯ ತಪ್ಪಿ ಉರುಳು ಕುತ್ತಿಗೆಯನ್ನು ಬಿಗಿದು ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಧರಣಿಯನ್ನು ಕೈ ಬಿಡುವಂತೆ ಪ್ರತಿಭಟಕಾರರ ಮನವಲಿಸಲು ಪ್ರಯತ್ನಿಸಿದ ಸಹಾಯಕ ಆಯುಕ್ತೆ ಡಾ. ನಯನ
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.