May 6, 2024

Bhavana Tv

Its Your Channel

ಗುರುವಿನಪುರ ಗ್ರಾಮದಲ್ಲಿ ಕಡಬೂರು ಮಂಜುನಾಥ ರವರ ನೇತೃತ್ವದಲ್ಲಿ ಹಲವಾರು ಗ್ರಾಮದ ಮುಖಂಡರುಗಳು ಜೆಡಿಎಸ್ ಸೇರ್ಪಡೆ

ಗುಂಡ್ಲುಪೇಟೆ ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತೊರೆದು ಹಲವಾರು ಗ್ರಾಮದ ಮುಖಂಡರುಗಳು 80ಕ್ಕೂ ಹೆಚ್ಚು ಮಂದಿ ಕಡಬೂರು ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.

ಗ್ರಾಮದ ಮುಖಂಡರುಗಳು ಮಾತನಾಡಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಕೆಲಸಗಳನ್ನು ಮತ್ತು ರೈತರ ಪರ ಕಾಳಜಿ ಇರುವ ಮುಖ್ಯಮಂತ್ರಿ ಎಂದರೆ ಹೆಚ್‌ಡಿ ಕುಮಾರಸ್ವಾಮಿ ಹಾಗಾಗಿ ಜನರು ಮೆಚ್ಚಿ ಸಾಮಾನ್ಯರ ಮತ್ತು ಬಡವರ ಪರ ಯೋಜನೆಗಳಿಗಾಗಿ ಕುಮಾರಸ್ವಾಮಿಯವರು ಮಾಡಿರುವ ಕೆಲಸ ಅನನ್ಯವಾಗಿದೆ ಹಾಗಾಗಿ ನಾವು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದೇವೆ ಎಂದು ಗ್ರಾಮಸ್ಥರು ಮಾಧ್ಯಮದ ಮುಖಾಂತರ ತಿಳಿಸಿದರು

ಈ ಸಂದರ್ಭದಲ್ಲಿ ಚಾಮರಾಜನಗರ ತಾಲೂಕು ಅಧ್ಯಕ್ಷರಾದ ಅಕ್ರಮ್ ಪಾಷಾ ಬಾಚಹಳ್ಳಿ ಮನಿ ,ಪ್ರದೀಪ್, ಪುನೀತ್ ,ದಿವ್ಯ ನಾಗ್ , ಮುತ್ತಣ್ಣ ,ಕಂದೇಗಾಲ ಪ್ರಸಾದ್, ಮಂಜು, ಸ್ವಾಮಿ, ರವಿ ಹಾಗೂ ಗುರುವಿನ ಗ್ರಾಮದ ಬಸವಣ್ಣ, ಚೆನ್ನಪ್ಪ, ಲಚ್ಚ ಚಾರಿ ಶ್ರೀಕಂಠಪ್ಪ, ಚಂದ್ರಪ್ಪ, ಸ್ವಾಮಿ, ಮಹೇಶ್, ರವಿ, ಮಂಜು, ಮಾದೇವಪ್ಪ ಪ್ರಭು, ಸೋಮಪ್ಪ ಸಿದ್ದಪ್ಪ, ಮಹೇಶ್ ಪ್ರಸಾದ, ಜಿಬಿ ಮಹೇಶ್, ಮಲ್ಲು ಸಂತೋಷ್, ಮಂಜು ಪ್ರಸಾದ್, ಗುರುಪ್ರಸಾದ್, ನಾಗೇಶ್, ಗುರುಮಲ್ಲಪ್ಪ ,ಸೇರಿದಂತೆ ಇನ್ನು ಮುಂತಾದ ಯುವಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೆಗಾಲ

error: