
ಹೊನ್ನಾವರ :- ತಾಲೂಕಿನ ಮಂಕಿ ಹಳೆಮಠ ರಸ್ತೆಯಲ್ಲಿರುವ ನಾವಯತ್ ಕಾಲೋನಿಯಲ್ಲಿ ಬದ್ರುದುಜಾ ಪಕರ್ಜಿ ಹೆಸರಿನ ವ್ಯಕ್ತಿಗೆ ಸೇರಿದ್ದೆಂದು ಹೇಳಲಾದ ನಿರ್ಮಾಣ ಹಂತದಲ್ಲಿರುವ ಕಟ್ಟಡ ಹಿಂಬಾಗದಲ್ಲಿ ಜಾನುವಾರುಗಳನ್ನು ಕದ್ದು ತಂದು ಕಟ್ಟಿಹಾಕಿ ಇಟ್ಟಿದ್ದರು., ಈ ಬಗ್ಗೆ ಖಚಿತ ಮಾಹಿತಿಯ ದೊರೆತ ಹಿನ್ನಲೆಯಲ್ಲಿ ಕೂಡಲೇ ದಾಳಿ ನಡೆಸಿದ ಹೊನ್ನಾವರ ಹಾಗೂ ಮಂಕಿ ಠಾಣೆಯ ಪೊಲೀಸರು ೧೧ ಜಾನುವಾರುಗಳನ್ನು ಪತ್ತೆಹಚ್ಚಿ ಮನೆಯ ಮಾಲಿಕ ಹಾಗೂ ಕಾವಲುಗಾರನ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಗುರುವಾರ ತಡರಾತ್ರಿ ಹೊನ್ನಾವರ ಹಾಗೂ ಮಂಕಿ ಪೋಲಿಸರು ಜಂಟಿಯಾಗಿ ಈ ಕಾರ್ಯಕ್ಕೆ ಮುಂದಾಗಿ ಗೋವುಗಳ ರಕ್ಷಣೆ ಮಾಡಿರುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಟ್ಕಳ ವಿಭಾಗದ ಎ.ಎಸ್ಪಿ ನಿಖಿಲ್ ಬುಳ್ಳಾವರ್ ಮಾರ್ಗದರ್ಶನದಲ್ಲಿ ಹೊನ್ನಾವರ ಸಿ.ಪಿ.ಐ ವಸಂತ ಆಚಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಹೊನ್ನಾವರ ಠಾಣೆಯ ಕಿರಿಯ ಪಿ.ಎಸ್.ಐ ಅಶೋಕ ಲಮಾಣಿ, ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಬಿ ಕೊಣ್ಣೂರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ೧೧ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು ಇವುಗಳ ಮಾರುಕಟ್ಟೆ ಮೌಲ್ಯ ಸುಮಾರು ೪೬೦೦೦ ರುಪಾಯಿ ಎಂದು ಅಂದಾಜಿಸಲಾಗಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.