ಕಾರ್ಕಳ ತಾಲೂಕಿನಲ್ಲಿ ನೀತಿಸಂಹಿತೆ ಪ್ರಯುಕ್ತ ಶಂಕುಸ್ಥಾಪನೆ ಹಾಗೂ ಕಾಮಗಾರಿ ಉದ್ಘಾಟನೆ ಫಲಕಗಳನ್ನು ಮುಚ್ಚಿದ್ದನ್ನು ಚುನಾವಣೆ ಮುಗಿದರು ತೆರೆವುಗೊಳಿಸದ ಪುರಸಭೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು 40 ದಿನಗಳಾದರೂ ಕಾರ್ಕಳದಲ್ಲಿ ಚುನಾವಣಾ ನೀತಿ ಸಂಹಿತೆ ಇನ್ನು ಜಾರಿಯಲ್ಲಿರುವುದು ತುಂಬಾ ಆಶ್ಚರ್ಯದಾಯಕ, ಮುಂಬರುವ ಲೋಕಸಭಾ ಚುನಾವಣೆ ಯ ವರೆಗೆ ಕಾರ್ಕಳದ ನೀತಿ ಸಹಿತ ಜಾರಿಯಲ್ಲಿ ಇರಬಹುದೆಂದು ಕಾರ್ಕಳ ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕಾರಣ ಚುನಾವಣೆ ಘೋಷಣೆಯಾದ ನಂತರ ಕಾರ್ಕಳ ತಾಲೂಕಿನಲ್ಲಿ ಎಲ್ಲೆಲ್ಲಿ ಶಂಕುಸ್ಥಾಪನೆ ಹಾಗೂ ಕಾಮಗಾರಿಗೆ ಉದ್ಘಾಟನೆ ಫಲಕಗಳ ಮೇಲೆ ಚುನಾವಣೆ ಅಧಿಕಾರಿಗಳು ಮತ್ತು ಪುರಸಭೆ ಸಿಬ್ಬಂದಿಗಳು ನಾಮ ಫಲಕಗಳ ಮೇಲೆ ಬಿತ್ತಿ ಪತ್ರ ಪತ್ರಗಳನ್ನು ಅಂಟಿಸಿ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಚುನಾವಣೆ ಮುಗಿದು ಹೊಸ ಸರಕಾರ ಬಂದು ಒಂದು ತಿಂಗಳಾದರೂ ಆ ಫಲಕಗಳ ಮೇಲೆ ಅಂಟಿಸಿದ ಬಿತ್ತಿಪತ್ರಗಳನ್ನು ಅಧಿಕಾರಿಗಳು ತೆಗೆಯುವ ಗೋಜಿಗೆ ಇಷ್ಟರ ತನಕ ಹೋಗದೆ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಇನ್ನಾದರೂ ಅಧಿಕಾರಿಗಳು ಆ ಬಿತ್ತಿಪತ್ರಗಳನ್ನು ತೆರವುಗೊಳಿಸ ಬಹುದೆಂದು ನಂಬಿರುತ್ತೇನೆ ಎಂದು ಪ್ರಕಾಶ್ ರಾವ್ ಮಾಧ್ಯಮದೊಂದಿಗೆ ಹೇಳಿಕೊಂಡರು.
ವರದಿ : ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,