May 9, 2024

Bhavana Tv

Its Your Channel

ಶ್ರೀ ಕ್ಷೇತ್ರ ಅತ್ತೂರು ಪರ್ಪಲೆ ಗಿರಿಗೆ ಶಿಲಾಯಾತ್ರೆ:

ಕಾರ್ಕಳ : ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಲ್ಕುಡ ಸಪರಿವಾರ ದೈವಸ್ಥಾನ ಅತ್ತೂರು ಇಲ್ಲಿನ ಶ್ರೀ ಕ್ಷೇತ್ರ ಪುನರುತ್ಥಾನ ನಿಮಿತ್ತ ಶಿಲಾಮಯಯಾತ್ರೆ ಬುಧವಾರ ಬೆಳಿಗ್ಗೆ ನಡೆಯಿತು.
ಬೆಳಿಗ್ಗೆ 7.30ಕ್ಕೆ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಿಂದ ಅನಂತಶಯನ ಮಾರ್ಗವಾಗಿ ಗೊಮ್ಮಟಬೆಟ್ಟ, ಆನೆಕೆರೆ, ಶ್ರೀಕೃಷ್ಣ ದೇವಸ್ಥಾನ, ಬಾಲಾಜಿ ಅಯ್ಯಪ್ಪ ಶಿಬಿರ, ದೂಪದಕಟ್ಟೆ ಯಿಂದ ಅತ್ತೂರು ಪರ್ಪಲೆಗಿರಿವರೆಗೆ ಶಿಲಯಾತ್ರೆಯ ವಾಹನ ಜಾಥದ ಮೂಲಕ ಸಾಗಿ ಬಂತು.ಬಳಿಕ ಅತ್ತೂರು ಪರ್ಪಲೆಗಿರಿಯಲ್ಲಿ ಕಲ್ಕುಡ, ಕಲ್ಲುರ್ಟಿ ತೂಕತ್ತೇರಿ ,ಲೆಕ್ಕೆಸಿರಿ, ಪಂಜುರ್ಲಿ ದೈವಗಳ ಗುಡಿ ಗೋಪುರಕ್ಕೆ ಶಿಲಾಪೂಜೆ ಕಾರ್ಯಕ್ರಮ ನೆರವೇರಿತು.
ವರದಿ ; ಅರುಣ ಭಟ್ ಕಾರ್ಕಳ

error: