May 9, 2024

Bhavana Tv

Its Your Channel

ವೆಂಕಟಾಪುರ ಸೇತುವೆಯ ಮೇಲೆ ಲಾರಿ ಹಾಗೂ ಕಾರಿನ ನಡುವೆ ಅಪಘಾತ

ಭಟ್ಕಳ: ತಾಲೂಕಿನ ವೆಂಕಟಾಪುರ ಸೇತುವೆಯ ಮೇಲೆ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿ ಅಪಘಾತದಲ್ಲಿ ಲಾರಿ ಮಗುಚಿ ಬಿದ್ದು ಕೆಲ ಕಾಲ ಹೆದ್ದಾರಿಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆಯಾಯಿತು.

ಕೇರಳದಿಂದ ಫ್ಲೆöÊವುಡ್ ತುಂಬಿಕೊAಡು ಪುಣೆಗೆ ಹೋಗುತ್ತಿರುವ ಲಾರಿ ಭಟ್ಕಳದ ಸರ್ಪನಕಟ್ಟೆಯಿಂದ ಶಿರಾಲಿಯ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನ ಹಿಂಬಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಫ್ಲೆöÊವುಡ್ ತುಂಬಿದ ಲಾರಿಯು ಮಗುಚಿ ಬಿದ್ದು ಸಂಪೂರ್ಣ ಫ್ಲೆöÊವುಡ್ ರಸ್ತೆಯಲ್ಲಿಯೇ ಚೆಲ್ಲಿದೆ. ಕಾರಿನಲ್ಲಿ ಓರ್ವರೇ ಇದ್ದು ಹಿಂಬಾಗ ಭಾರೀ ನುಜ್ಜುಗುಜ್ಜಾದರೂ ಕಾರಿನಲ್ಲಿರುವ ಚಾಲಕನಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ. ಲಾರಿ ಚಾಲಕ ಸಹ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳದಲ್ಲಿ ಕಾರನ್ನು ನೋಡಿದವರಿಗೆ ಭೀಕರ ಅಪಘಾತ ಎಂತಾ ಕಾಣುವಂತಿದ್ದರೂ ಸಹ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು ಮಾತ್ರ ವಿಚಿತ್ರವಾಗಿದೆ.

error: