ಭಟ್ಕಳ : ಇಲ್ಲಿನ ಕಿತ್ರೆ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸೇವಾಖಂಡದ ಯೋಗಕ್ಷೇಮ ವಿಭಾಗ, ಮಹಾಮಂಡಲದ ಸಹಾಯ ವಿಭಾಗ, ಭವತಾರಿಣಿ ವಲಯ ಹಾಗೂ ಶ್ರೀ ಕ್ಷೇತ್ರ ದೇವಿಮನೆ ಆಡಳಿತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಆ. 23 ರಂದು ಮಂಗಳವಾರ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಕ್ಷೇಮ ಹೆಲ್ತ್ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ.
ಅಂದು ಬೆಳಿಗ್ಗೆ 9.30ರಿಂದ 1 ಗಂಟೆಯವರೆಗೆ ಹೆಲ್ತಕಾರ್ಡ ನೋಂದಣಿ ನಡೆಯಲಿದ್ದು,ವಯಕ್ತಿಕ ಮತ್ತು ಕುಟುಂಬದವರಿಗಾಗಿ ವೈದ್ಯಕೀಯ ಸೌಲಭ್ಯದ ವಿಮಾ ಯೋಜನೆಗಳಿದ್ದು, ವಯಕ್ತಿಕ ವಿಮಾ 30 ಸಾವಿರಕ್ಕೆ 200 ರೂ, 50 ಸಾವಿರಕ್ಕೆ 400 ರೂ. ಹಾಗೂ ಐದು ಜನ ಸದಸ್ಯರಿಗೆ 30 ಸಾವಿರಕ್ಕೆ 400, 50 ಸಾವಿರಕ್ಕೆ 700, ಏಳು ಜನ ಸದಸ್ಯರಿಗೆ 30 ಸಾವಿರಕ್ಕೆ 700ರೂ ಹಾಗೂ 50 ಸಾವಿರದ ವಿಮಾ ಯೋಜನೆಗೆ 1050 ರೂ ನಿಗದಿಪಡಿಸಲಾಗಿದ್ದು, ನೋಂದಣಿಗೆ ಪಡಿತರ ಚೀಟಿ ಹಾಗೂ ಆಧಾರ ಕಾರ್ಡ ಝೆರಾಕ್ಸ ದಾಖಲೆ ತರಬೇಕಿದೆ. ಕ್ಷೇಮ ಹೆಲ್ತ ಕಾರ್ಡ ನೋಂದಣಿ ಯಶಸ್ವಿಗೊಳಿಸುವಂತೆ ಭವತಾರಿಣಿ ಸೀಮಾ ಪರಿಷತ್ತಿನ ಅಧ್ಯಕ್ಷ ವಿನಾಯಕ ಭಟ್ಟ, ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಹಾಗೂ ಯೋಗಕ್ಷೇಮ ವಿಭಾಗದ ಸತೀಶ ಭಟ್ಟ ಹೊನ್ನಾವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಕುಂದಾಪುರದಲ್ಲಿ ನಡೆದ ಸಾವಿಷ್ಕಾರ್ ಫೆಸ್ಟ್ ನಲ್ಲಿ ಉತ್ತಮ ಹೆಸರು ಗಳಿಸಿದ ಅಂಜುಮನ್ ಇಂಜಿನಿಯರಿ0ಗ್ ವಿದ್ಯಾರ್ಥಿಗಳು
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ