May 4, 2024

Bhavana Tv

Its Your Channel

ಡಾ. ಸವಿತಾ ಕಾಮತ ಅವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಚಿನ್ನದ ಪದಕ

ಭಟ್ಕಳ: ತಾಲೂಕಾ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಗಳಾಗಿ ಅತ್ಯಂತ ಉತ್ತಮ ಹಾಗೂ ದಕ್ಷ ಸೇವೆಯಿಂದ ಸರಕಾರಿ ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಿ, ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿ ಮಾಡುವಲ್ಲಿ ಶ್ರಮ ವಹಿಸಿದ ಡಾ. ಸವಿತಾ ಕಾಮತ್ ಅವರು ಮುಖ್ಯ ಮಂತ್ರಿಗಳ ಗೌರವಕ್ಕೆ ಪಾತ್ರರಾಗಿರುವುದು ಜಿಲ್ಲೆಯೇ ಹೆಮ್ಮೆ ಪಡುವಂತಾಗಿದೆ.
ತಾಲೂಕಾ ಆಸ್ಪತ್ರೆಯನ್ನು ಅತ್ಯಂತ ಸ್ವಚ್ಚವಾಗಿಟ್ಟಿದ್ದಲ್ಲದೇ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲದೆಂತೆ ಅಭಿವೃದ್ದಿ ಮಾಡಿದ್ದಲ್ಲದೇ ಚಿಕಿತ್ಸೆಯಲ್ಲಿಯೂ ಗುಣಮಟ್ಟವನ್ನು ಆಯ್ದುಕೊಂಡು ಅಕ್ಕಪಕ್ಕದ ಜಿಲ್ಲೆಯಿಂದ ಭಟ್ಕಳ ತಾಲೂಕಾ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಮರಳುವಷ್ಟರ ಮಟ್ಟಿಗೆ ಬೆಳೆಸಿದ ಕೀರ್ತಿ ಡಾ. ಸವಿತಾ ಕಾಮತ್ ಅವರದ್ದು.
ಶನಿವಾರ ರಾಷ್ಟೀಯ ವೈದ್ಯರ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿನ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಟ್ಕಳದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಚಿನ್ನದ ಪದಕ ನೀಡಿ ಗೌರವಿಸಿದರು.
ಡಾ. ಕಾಮತ ಅವರು ಪ್ರತಿದಿನ ಸುಮಾರು 7 ರಿಂದ 8 ಶಸ್ತçಚಿಕಿತ್ಸೆಗಳಲ್ಲಿ ಭಾಗಿಯಾಗಿ ಅರವಳಿಕೆ ತಜ್ಞರ ಜವಾಬ್ದಾರಿ ನಿಭಾಯಿಸುತ್ತಿದ್ದರಲ್ಲದೇ ತಮ್ಮೊಂದಿಗೆ ಇದ್ದ ವೈದ್ಯರುಗಳು ನಿಷ್ಟೆಯಿಂದ ಬಡವರಿಗೆ ಯಾವುದೇ ಹೊರೆಯಾಗದಂತೆ ಚಿಕಿತ್ಸೆ ನೀಡುವಂತೆ ಪ್ರೇರೇಪಿಸಿ ಎಲ್ಲಾ ವೈದ್ಯರಿಂದಲೂ ಗುಣಮಟ್ಟದ ಸೇವೆ ದೊರೆಯುವಂತೆ ಮಾಡಿದ್ದರು.

error: