ಭಟ್ಕಳ: ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಭಟ್ಕಳ ತಾಲೂಕ ಪಂಚಾಯತ ಆವರಣದಲ್ಲಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ ಮುಸ್ಸಂಜೆಯಲ್ಲಿ ಜರುಗಿತು.
ತಹಸೀಲ್ದಾರ ನಾಗರಾಜ ನಾಯ್ಕರವರು ಮುಂಬತ್ತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಸೇರಿದ ವಿವಿಧ ಇಲಾಖಾ ಅಧಿಕಾರಿ ನೌಕರರು ಪರಸ್ಪರ ಮುಂಬತ್ತಿ ಬೆಳಗಿ ಮತದಾನ ಜಾಗೃತಿ ಘೋಷಣೆ ಕೂಗಿದರು.
ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು, ತಾಲೂಕ ಪಂಚಾಯತ ಕಾರ್ಯನಿರ್ವಾಹಕಅಧಿಕಾರಿಗಳಾದ ವಿ.ಡಿ.ಮೊಗೇರ ತಪ್ಪದೇ ಮತದಾನ ಮಾಡುವ ಮೂಲಕ ಪ್ರತಿಶತ ಮತದಾನಕ್ಕೆ ಇಲಾಖಾ ನೌಕರರು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ದೀಪಾವಳಿಯ ದೀಪದ ಬೆಳಕಲ್ಲಿ ಮಿಂದೆದ್ದ ರೀತಿಯಲ್ಲಿ ಭಾಸವಾದ ಈ ಕಾರ್ಯಕ್ರಮ ಆಸುಪಾಸಿನ ನಾಗರೀಕರು, ದಾರಿಹೋಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ, ಜಾಲಿ ಪಟ್ಟಣಪಂಚಾಯತಿ ಮುಖ್ಯಾಧಿಕಾರಿ ಮಂಜಪ್ಪ ಎನ್. ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ವ್ಯವಸ್ಥಾಪಕಿ ಲತಾ ನಾಯ್ಕ, ನರೇಗಾ ಸಹಾಯಕ ನಿರ್ದೇಶಕರು ಉದಯ ಬೋರಕರ್, ತಾಲೂಕ ಹಿಂದುಳಿದ ವರ್ಗಗಳ ಅಧಿಕಾರಿ ವೆಂಕಟ್ರಮಣ ಭಟ್, ಸಹಾಯಕ ಆಯುಕ್ತರ ಕಛೇರಿ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕಿನ ಓಖಐಒ, ನರೇಗಾ ಸಿಬ್ಬಂದಿಗಳು ಮತ್ತು ಗ್ರಾ.ಪಂ. ಪಂ.ಅ.ಅಧಿಕಾರಿಗಳು, ಕಾರ್ಯದರ್ಶಿ, ಲೆಕ್ಕ ಸಹಾಯಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.