May 9, 2024

Bhavana Tv

Its Your Channel

ಪ್ರಭಾತವನ ಉದ್ಯಾನವನದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ವನಮಹೋತ್ಸವ

ಹೊನ್ನಾವರ ಪಟ್ಟಣದ ಪ್ರಭಾತನಗರದ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಪ್ರಭಾತವನ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಮತ್ತು ಪ್ರಭಾತವನ ಅಭಿವೃದ್ಧಿ ಸಮೀತಿಯಿಂದ ಉತ್ತಮ ಔಷಧೀಯ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.

ಗಿಡ ಕೇವಲ ಗಿಡವಲ್ಲ ಅದು ನಮ್ಮ ಜೀವನಾಡಿ ಅದರ ಉಪಯೋಗ ಹಲವಾರು, ನಮ್ಮ ಮಕ್ಕಳಂತೆ ಜೋಪಾನಮಾಡಿ ಬೆಳೆಸಬೇಕು ಎಂದು ಪಟ್ಟಣ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಮೇಧಾ ನಾಯ್ಕ್ ಹೇಳಿದರು.
ಸಮೀತಿಯ ಕಾರ್ಯದರ್ಶಿ ಡಿ ಡಿ ಮಡಿವಾಳ ಸ್ವಾಗತಿಸಿ ಜೀವ ವೈವಿದ್ಯಕ್ಕೆ ಆಮ್ಲಜನಕ ಅತೀ ಅವಶ್ಯ, ಗಿಡಗಳನ್ನು ಬೆಳೆಸಿದರೆ ಮುಂದಿನ ತಲೆಮಾರು ನಮ್ಮನ್ನು ನೆನೆಸುತ್ತದೆ.ಕೊರೊನಾ ಸಮಯದಲ್ಲಿ ಆಮ್ಲಜನಕದ ಅಗತ್ಯತೆ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು. ವಾರ್ಡ ಸದಸ್ಯರಾದ ನಾಗರಾಜ್ ಭಟ್. ಬಿ ಜೆ ಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಾರದಾ ನಾಯ್ಕ್.ಸಮೀತಿ ಅಧ್ಯಕ್ಷರಾದ ಜಿ ವಿ ನಾಯ್ಕ್
.ಅರಣ್ಯ ಸಿಬಂದಿಗಳಾದ ರಾಘವೇಂದ್ರ ನಾಯ್ಕ್,ಮರ್ತುಜಾ, ಇಲ್ಲಿಯ ನಿವಾಸಿಗಳಾದ ಜಿ. ಜಿ ಭಟ್,ಎಂ ಎಂ ಹೆಗ್ಡೆ,ಅನ್ಸಾರಿ,ಕಿರಣ್ ನಾಯ್ಕ್,ಬಾಲಚಂದ್ರ ಬಾಂದೇಕರ್,ಶAಕರ ಮಹಾಲೆ, ಅಮಿತ್ ,ಶ್ರೀಮತಿ ಸರಸ್ವತಿ ಮುಂತಾದವರು ಇದ್ದರು.
ಉದ್ಯಾನವನದ ವಾಕಿಂಗ್ ಪಾತ್ ಅರ್ಧ ಮಾತ್ರ ಇಂಟರ್ಲಾಕ್ಕಿAಗ್ ಆಗಿದ್ದು ಮಳೆಗಾಲದಲ್ಲಿ ಕೆಲವರು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದು ಅದನ್ನು ಪೂರ್ತಿ ಗೊಳಿಸುವಂತೆ ಪಟ್ಟಣ ಪಂಚಾಯತ ಉಪಾಧ್ಯಕ್ಷರಲ್ಲಿ ಮತ್ತು ವಾರ್ಡ ಸದಸ್ಯರಲ್ಲಿ ಮನವಿ ಮಾಡಲಾಯಿತು.

error: