May 12, 2024

Bhavana Tv

Its Your Channel

ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.

ಹೊನ್ನಾವರ ; ನ್ಯಾಯಲಯದ ಆದೇಶ ಮೀರಿಯೂ ಅಧಿಕಾರಿಗಳು ಮರಳುಗಣಿಗಾರಿಕೆ ನಡೆಸಲು ಅನುಮತಿ ನೀಡುವ ಮೂಲಕ ಜಿಲ್ಲಾಧಿಕಾರಿಗಳು ಗಣೆ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದು, ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡುದಾಗಿ ಉದ್ದಿಮೆದಾರರು, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ ಮಾಡಿದರು.

ಹೊನ್ನಾವರ  ಪಟ್ಟಣದ ಖಾಸಗಿ ಹೊಟೇಲನಲ್ಲಿ ಶುಕ್ರವಾರ ಮಾಧ್ಯಮಗೊಷ್ಟಿ ನಡೆಸಿ ಮಾಹಿತಿ ನೀಡಿದ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶರಾವತಿ ನದಿಯಿಂದ ಮರಳು ಸಾಗಾಟ ನಡೆಸಲು 42 ಜನರಿಗೆ ಪಾಸ್ ನೀಡುವ ಮೂಲಕ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇದರಲ್ಲಿ ಸಾಂಪ್ರದಾಯಿಕ ಮರಳುಗಣಿಗಾರಿಕೆ ಮಾಡುವರಿಗೆ ನೀಡಿಲ್ಲ. ನಮ್ಮ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಕಳೆದ ಫೆಬ್ರವರಿ 18 ರಂದು ಮರಳು ಉಸ್ತುವಾರಿ ಸಭೆ ನಡೆಸಿ ಮರಳು ಗಣಿಗಾರಿಕೆ ಪ್ರಾರಂಭ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಕರಾವಳಿಯ ಮೂರೂ ಜಿಲ್ಲೆಗಳಲ್ಲಿಯೂ ಸಾಂಪ್ರದಾಯಿಕ ಮರಳುಗಾರಿಕೆಗೆ ಮಾತ್ರ ಅವಕಾಶವಿದೆ. ನಮ್ಮ ತಾಲೂಕಿನಲ್ಲಿ 42 ಜನರಿಗೆ ಮರಳು ತೆಗೆಯಲು ಪಾಸ್ ನೀಡಲಾಗಿದೆ. ಆದರೆ ಪಾಸ್ ಪಡೆದವರಲ್ಲಿ ಬಹುತೇಕ ಜನರು ಸಾಂಪ್ರದಾಯಿಕ ಮರಳು ತೆಗೆಯಲು ಅರ್ಹತೆ ಇಲ್ಲದವರೇ ಆಗಿದ್ದಾರೆ. ಇವರಿಗೆ ದೋಣಿ ಚಲಾಯಿಸಲು ಬರುವುದಿಲ್ಲ. ಇಂಥವರೆಲ್ಲ ತಾವು ಸಾಂಪ್ರದಾಯಿಕ ಮರಳು ತೆಗೆಯುವವರು ಎಂದು ಹೇಳಿಕೊಂಡು ಆಮಿಷವೊಡ್ಡಿ ಪಾಸ್ ಪಡೆದುಕೊಂಡಿದ್ದಾರೆ. ಇವರ ಒತ್ತಡಕ್ಕೆ ಮಣಿದು ಹಣ ತೆಗೆದುಕೊಂಡು ದೊಡ್ಡ ಮಟ್ಟದ ಬ್ರಷ್ಟಾಚಾರ ನಡೆಸಿ ಅಧಿಕಾರಿಗಳು ಪಾಸ್ ನೀಡಿದ್ದಾರೆ. ಇದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಶಾಮೀಲಾಗಿದ್ದಾರೆ.

  ತಾತ್ಕಾಲಿಕ ಪರವಾನಗಿ ಪಡೆದವರಿಗೆ ನಿಯಮಾವಳಿ ಪ್ರಕಾರ ಒಂದು ವಾಹನದಲ್ಲಿ ಗರಿಷ್ಠ 10 ಟನ್ ಮರಳನ್ನು ಮಾತ್ರ ಸಾಗಿಸಲು ಅವಕಾಶವಿದೆ. ಆದರೆ ಯಾವುದೇ ಮಾಪನ ಇಲ್ಲದೇ ಮನಬಂದAತೆ ಮರಳು ಸಾಗಾಟ ಮಾಡುತ್ತಿದ್ದಾರೆ. ಒಂದು ವಾಹನದಲ್ಲಿ 13 ರಿಂದ 18 ಟನ್‌ಗಳಷ್ಟು ಅಂದರೇ 3 ರಿಂದ 8 ಟನ್‌ಗಳಷ್ಟು ಹೆಚ್ಚು ಮರಳನ್ನು ಸಾಗಿಸಲಾಗುತ್ತಿದೆ. ಮರಳು ವಾಹನದ ಎತ್ತರವನ್ನು ಏರಿಸಿ ಹೆಚ್ಚಿನ ಮರಳನ್ನು ಸಾಗಾಟ ಮಾಡುತ್ತಾರೆ. ಇದರಿಂದ ಸರ್ಕಾರ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತಿದೆ. ಶರಾವತಿ ನದಿಯಿಂದ ಬ್ರಹತ್ ಪ್ರಮಾಣದ ಮರುಳು ಸಾಗಾಟ ನಡೆಯುತ್ತಿದ್ದರೂ ಮರಳನ್ನು ತೂಕ ಮಾಡುವ ಮಾಪನಯಂತ್ರವನ್ನು ತಾಲೂಕಿನಲ್ಲಿ ಎಲ್ಲೂ ಅಳವಡಿಸಿಲ್ಲ. ಇದರಿಂದ ಪಾಸ್ ಪಡೆದುಕೊಂಡು ಹೆಚ್ಚುವರಿ ಮರಳು ಸಾಗಾಟ ಮಾಡುವವರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ. ಪಾಸ್ ಪಡೆದವರೇ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದಾರೆ ಎಂದರು.

  ಈವರೆಗೂ ನಮ್ಮ ಜಿಲ್ಲೆಯಲ್ಲಿ ಹೊಸ ಮರಳು ನೀತಿ ಜಾರಿಯಾಗಿಲ್ಲ. ಇದರಿಂದ ನೈಜ ಪಾರಂಪರಿಕ ಮರಳುಗಾರಿಕೆದಾರರಿಗೆ ಅನುಕೂಲವಾಗುತ್ತಿತ್ತು. ಇಲಾಖೆ ಅಧಿಕಾರಿಗಳು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. 100 ರಿಂದ 150 ಕೋಟಿ ರೂ. ಗಳಷ್ಟು ರಾಜಧನ ನಷ್ಟವಾಗಿದ್ದು ಇದು ಹಗಲು ದರೋಡೆಯಾಗಿದೆ. ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹೋರಾಟವನ್ನು ಮುಂದೂಡಿದ್ದೇವೆ. ಚುನಾವಣೆ ಪ್ರಕ್ರಿಯೆ ನಡೆದ ನಂತರ ಅಧಿಕಾರಿಗಳ ವಿರುದ್ದ ಹೋರಾಟ ನಡೆಸಲಾಗುವುದು.

ತಾಲೂಕಿಗೆ ಬುಧವಾರ ಡಿಎಂಜಿ ಅಧಿಕಾರಿ ಆಶಾ ಎಂ.ಎಸ್. ಅವರು ಭೇಟಿ ನೀಡಿದ್ದರು. ಪಾಸ್ ಹೊಂದಿದವರು ನಿಗದಿತ ಪ್ರಮಾಣಕ್ಕೆಇಂತ ಹೆಚ್ಚಿನ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ಅವರು ವಾಹನ ಪಂಕ್ಚರ್ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಇಲ್ಲಾಖೆಯಲ್ಲಿನ ಬ್ರಷ್ಟಾಚಾರವನ್ನು ಬಯಲಿಗೆಳೆಯಲು ಮತ್ತು ನ್ಯಾಯಾಲಯದ ಮೊರೆ ಹೋಗಿರುವುದನ್ನು ಗಮನಿಸಿ ಈ ಅಧಿಕಾರಿ ನಮ್ಮ ಮೇಲೆಯೆ ಸುಳ್ಳು ದೂರು ನೀಡಿದ್ದಾರೆ. ಇದೊಂದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದರು.

 ಈ ಸಂದರ್ಭದಲ್ಲಿ ಗಣೇಶ ನಾಯ್ಕ ಗೇರುಸೊಪ್ಪಾ, ಜಗದೀಶ ನಾಯ್ಕ , ಆನಂದ ನಾಯ್ಕ, ಬಾಲಕೃಷ್ಣ ಗೌಡ, ದಿನೇಶ ನಾಯ್ಕ, ಸುಬ್ರಾಯ ನಾಯ್ಕ, ಗಿರೀಶ ನಾಯ್ಕ ಚಿತ್ತಾರ ಇದ್ದರು.

ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ.

error: