May 20, 2024

Bhavana Tv

Its Your Channel

ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್

ಭಟ್ಕಳ : ಗೌರವಾನ್ವಿತ ಹಳೆಯ ವಿದ್ಯಾರ್ಥಿ ಮತ್ತು ಪ್ರಸ್ತುತ ಯುಕೆಡಿಎಫ್‌ಎ ಅಧ್ಯಕ್ಷರಾದ ಶ್ರೀ ಮಾವಿಯಾ ಮೊಹ್ತೇಶಾಮ್ ಅವರು ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು .ಅವರು ಮಾತನಾಡಿ ಕ್ರೀಡೆಯ ಮಹತ್ವ ವನ್ನು ವಿವರಿಸಿದರು. ಅವರ ಜೊತೆಯಲ್ಲಿ ಪ್ರಾಂಶುಪಾಲರಾದ ಡಾ. ಕೆ. ಫಜಲುರಹ್ಮಾನ್, ಮಾತನಾಡಿ ಆಟದಲ್ಲಿ ಗೆಲವು ಸೋಲು ಮುಖ್ಯವಲ್ಲ, ಭಾಗವಹಿಸುವದೇ ಮುಖ್ಯ ಎಂದರು. ಜತೆಗೆ ವೇದಿಕೆಯ ಮೇಲೆ ರಿಜಿಸ್ಟಾರ್ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಇದ್ದರು.

ಬೆಳಿಗ್ಗೆ ೧೦ ಗಂಟೆಗೆ ಪವಿತ್ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಒಟ್ಟು ೧೨ ವಿವಿಧ ಕ್ರೀಡೆಗಳು ಆಯೋಜಿಸಲ್ಪಟ್ಟವು. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ದೃಢತೆಯನ್ನು ಸಂಜೆ ೫ ಗಂಟೆಯವರೆಗೆ ಪ್ರದರ್ಶಿಸಿದರು. ಪ್ರಾಂಶುಪಾಲ ಡಾ.ಫಜಲುರ್ ರೆಹಮಾನ್ ಕೆ, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಕರೂರಿ, ಮತ್ತು ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್ ಅವರು ಪ್ರೊ.ಜುಹೇರ್, ಪ್ರೊ.ಸೈಯದ್ ನೂರೇನ್ ಮತ್ತು ವಿದ್ಯಾರ್ಥಿಗಳ ಜೊತೆಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

error: