May 8, 2024

Bhavana Tv

Its Your Channel

ಇಂದು ಜಿಲ್ಲಾಧಿಕಾರಿಗಳು ಹೊನ್ನಾವರ ನೆರೆ ಪೀಡಿತ ಪ್ರದೇಶಗಳಿಗೆ ಬೇಟಿ, ಪರಿಶೀಲನೆ.

ಹೊನ್ನಾವರ ; ಉ.ಕ ಜಿಲ್ಲಾಧಿಕಾರಿಗಳು ರವಿವಾರ ಹೊನ್ನಾವರ ತಾಲೂಕಿನ ನೆರೆಪೀಡಿತ ಪ್ರದೇಶ ಗಳಾದ ಹಳದಿಪುರ ಗ್ರಾಮದ ಬಡಗಣಿ ಹೊಳೆ ಅಕ್ಕ ಪಕ್ಕ ದ ಸ್ಥಳಗಳನ್ನು ಪರಿಶೀಲಿಸಿ. ನಂತರ ನವಿಲಗೊಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆರಪ್ರದೇಶ ಹಾಗು ಕಾಳಜಿ ಕೇಂದ್ರ ಹಾಗೂ ಕಡತೋಕಾ, ಕೆಕ್ಕಾರ ಕಾಳಜಿ ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಕ್ಕಾರ್ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರೊoದೀಗೆ ಊಟ ಸಹ ಮಾಡಿದರು.

ನಂತರ ಹೂಜುಮುರಿ ಸುತ್ತ ಮುತ್ತ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕಿನ ಬಗ್ಗೆ ಪರಿಶೀಲಿಸಿದರು. ಚಿಕ್ಕನ್‌ಕೊಡ್ ಗ್ರಾಮ ಪಂಚಾಯತ್ ಗ್ರಾಮಗಳ ನರೆ ಪೀಡಿತ ಪ್ರದೇಶಗಳನ್ನು ಹಾಗೂ ಗುಂಡಿಬೈಲ್ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಗುಂಡ ಬಾಳ ನಡಿಯಂಚಿನಲ್ಲಿ ಅಳವಡಿಸಿರುವ ರೇಲಿಂಗ್ಸ್ ನ್ನೂ ಪರಿಶೀಲಿಸಿ. ಭಾಸ್ಕೇರಿ ಕಾಳಜಿ ಕೇಂದ್ರಕ್ಕೆ ನೆರೆ ಸಂತ್ರಸ್ತರ ಮನೆಗಳಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಭಟ್ಕಳ್ ಹಾಗೂ ತಹಸೀಲ್ದಾರ್ . ಇಒ, ನೊಡೆಲ್ ಅಧಿಕಾರಿಗಳು, ಪಿಡಿಒ, ಕಂದಾಯ ನಿರೀಕ್ಷಕರು ಉಪತಹಶೀಲದಾರರು ಹಾಜರಿದ್ದು ಮಾಹಿತಿ ನೀಡಿದರು.

error: