March 14, 2025

Bhavana Tv

Its Your Channel

ಶ್ರೀಮಯ ಯಕ್ಷಗಾನ ಕಲಾ ಕೇಂದ್ರ ಪ್ರಾರಂಭೋತ್ಸವ

ಹೊನ್ನಾವರ : 2023-24 ನೇ ಸಾಲಿನ ಯಕ್ಷಗಾನ ಕಲಿಕಾ ಶಿಬಿರವು ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ಯಕ್ಷಗಾನಕಾರ್ಯಾಗಾರ ಶ್ರೀ ಮಯ ಕಲಾ ಕೇಂದ್ರದಲ್ಲಿ ದಿನಾಂಕ 02.08.2023 ರಂದು ಬೆಳಿಗ್ಗೆ 11.00 ಗಂಟೆಗೆ ಶುಭಾರಂಭಗೊ0ಡಿತು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಗಂಗಾಧರಗೌಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಮಯ ಕಲಾ ಕೇಂದ್ರ ಹಲವಾರು ವರ್ಷಗಳಿಂದ ಯಕ್ಷಗಾನ ಸೇವೆ ಸಲ್ಲಿಸುತ್ತಾ ಬಂದಿದ್ದು ಯಕ್ಷಗಾನ ಕೆರೆಮನೆ ಮನೆತನದ ತ್ಯಾಗ ಶ್ಲಾಘನೀಯ ಎಂದು ಅವರು ಹೇಳಿದರು.
ಮುಖ್ಯ ಅಭ್ಯಾಗತರಾಗಿ ಯಕ್ಷರಂಗ ಮಾಸ ಪತ್ರಿಕೆಯ ಸಂಪಾದಕರಾದ ಗೋಪಾಲ ಕೃಷ್ಣ ಭಾಗವತ ಇವರು ಯಕ್ಷಗಾನದ ಕುರಿತು ಮಾತನಾಡುತ್ತಾ ಯಕ್ಷಗಾನದ ಹಿರಿಮೆಯನ್ನು ಶಕ್ತಿ ಹಾಗೂ ವಿಸ್ತರತೆಯನ್ನು ತಿಳಿಸಿದರು. ಹೊರ ರಾಜ್ಯದಿಂದಲೂ ಯಕ್ಷಗಾನ ಕಲಿಕೆಗೆ ಬಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಈ ಅನುಭವತಮ್ಮ ಕಲಾ ಕ್ಷೇತ್ರಕ್ಕೆ ಹೆಚ್ಚಿನ ಬಲ ಚಿಂತನೆ ನೀಡುತ್ತದೆಎಂದು ಹಾರೈಸಿದರು.
ಕಳೆದ 36 ವರ್ಷಗಳಿಂದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುತ್ತಿರುವಯಕ್ಷಗಾನಗುರುಕುಲ ಕಲಾ ಕೇಂದ್ರ 37 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಶಿಬಿರದಲ್ಲಿ ದೆಹಲಿ, ಚ0ಡಿಗಡ, ಝಾರ್ಖಂಡ ರಾಜಸ್ಥಾನ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯದ 22 ಕಲಾ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಗೆ ಆಗಮಿಸಿದ್ದರು.
ಮಂಡಳಿಯ ನಿರ್ದೇಶಕರು ಕಾರ್ಯಕ್ರಮದ ಸಂಯೋಜಕರು ಆದಕೆರೆಮನೆ ಶಿವಾನಂದ ಹೆಗಡೆಯವರು ಸ್ವಾಗತಿಸಿ ತಮ್ಮ ಮಂಡಳಿಯ ಧೈಯೋದ್ದೇಶ ಹಾಗೂ ಕಾರ್ಯಾಗಾರದ ಮಹತ್ವ ತಿಳಿಸಿದರು. ಮಂಡಳಿಯ ಭಾಗವತರಾದ ಅನಂತ ಹೆಗಡೆ ದಂತಳಿಗೆ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಅವರಿಗೆ ಮದ್ದಲೆಯಲ್ಲಿ ಸಹಾಯಕರಾಗಿ ಶ್ರೀಧರ ಮರಾಠಿ, ಚಂಡೆಯಲ್ಲಿ ಶ್ರೀ ರಾಮನ್ ಹೆಗಡೆ ಸಹಾಯ ಒದಗಿಸಿದರು.
ಮುಖ್ಯ ಅತಿಥಿಗಳಾಗಿ ಯಕ್ಷರಂಗ ಮಾಸ ಪತ್ರಿಕೆಯ ಸಂಪಾದಕರಾದ ಗೋಪಾಲ ಕೃಷ್ಣ ಭಾಗವತರು ಆಗಮಿಸಿದ ವಿದ್ಯಾರ್ಥಿಗಳಿಗೆ ಯಕ್ಷಗಾನದ ವಿವಿಧ ಆಯಾಮಗಳ ಕುರಿತು ಹಾಗೂ ಯಕ್ಷಗಾನದ ಇಂದಿನ ಸ್ಥಿತಿ ಗತಿಯ ಬಗ್ಗೆ ತಿಳಿಸಿದರಲ್ಲದೇ ಯಕ್ಷಗಾನದ ಕಲಿಕೆಗೆ ದೂರದ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರಶಂಸಿಸಿದರು.
ಮ0ಡಳಿಯ ನಿರ್ದೇಶಕರು ಹಾಗೂ ಈ ಶಿಬಿರದ ಕುರಿತು ಪ್ರಾಸ್ತಾವಿಕ ಮಾತನಾಡಿ ಇಂಥಹ ಕೆಲಸಕ್ಕೆ ಸಮಾಜ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಮಂಡಳಿಯ ಕಲಾವಿದಕೆರೆಮನೆ ಶ್ರೀಧರ ಹೆಗಡೆ ವಂದನಾರ್ಪಣೆ ಮಾಡಿದರು. ಊರ ನಾಗರೀಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

error: