ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ, ಚಂದಾವರ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವದ ಅಂಗವಾಗಿ “ಆಚಾರಿ ಸಮಾಜದ ಭಜನಾ ಕಾರ್ಯಕ್ರಮ” ನಡೆಯಿತು.
ಕಾರವಾರ ಶೇಜವಾಡದ ವಿಘ್ನೇಶ್ವರ ಆಚಾರಿ ತಂಡದವರಿAದ ನಡೆದ ಭಜನಾ ಕಾರ್ಯಕ್ರಮದಲ್ಲಿ, ವಿಘ್ನೇಶ್ವರ ಆಚಾರಿ ಮತ್ತು ಮಂಜುನಾಥ್ ಆಚಾರಿ ಸುಶ್ರಾವ್ಯವಾಗಿ ಹಾಡುವ ಮೂಲಕ ಗಾನ ಸೇವೆ ಮಾಡಿದರು. ಇವರಿಗೆ ಹಾರ್ಮೋನಿಯಂ ನಲ್ಲಿ ಕುಮಟಾದ ವಿಜಯ್ ಮಹಾಲೆ ಹಾಗೂ ತಬಲಾದಲ್ಲಿ ಹರೀಶ್ ರಾಯ್ಕರ್ ಸಾಥ್ ನೀಡಿ ಸಹಭಾಗಿಯಾದರು.
ನಿರಂತರ ಸುರಿಯುತ್ತಿರುವ ಆರಿದ್ರ ಮಳೆಯ ಅಬ್ಬರದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಜನೆ ಆಲಿಸಿ, ಪಲ್ಲಕ್ಕಿ ಉತ್ಸವ ಕಣ್ತುಂಬಿಕೊAಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ವರದಿ: ನರಸಿಂಹ ನಾಯ್ಕ್ ಹರಡಸೆ
More Stories
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಡಿಕೆಶಿ ಘೋಷಣೆ