May 4, 2024

Bhavana Tv

Its Your Channel

ಆರ್. ಎನ್. ಎಸ್. ವಿದ್ಯಾನಿಕೇತನದಲ್ಲಿ ಪರಿಸರ ದಿನಾಚರಣೆ.

ಮುರುಡೇಶ್ವರ ; ಆರ್. ಎನ್. ಎಸ್. ವಿದ್ಯಾನಿಕೇತನದಲ್ಲಿ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ವೈವಿಧ್ಯಮಯವಾಗಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಶ್ರೀ ದಿನೇಶ್ ಗಾಂವಕರ್ ವಿದ್ಯಾನಿಕೇತನದ ಮಕ್ಕಳ ಪರಿಸರ ಕಾಳಜಿಯನ್ನು ಮೆಚ್ಚಿಕೊಂಡರು.
ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ಕೆಲವು ವಿದ್ಯಾರ್ಥಿಗಳು ಪರಿಸರ ಕಾಳಜಿಯ ಛದ್ಮವೇಷವನ್ನು ಧರಿಸಿ ಪರಿಸರ ಜಾಗ್ರತಿಯನ್ನು ಮೂಡಿಸಿದರು.
ಶಾಲೆಯ ವಿಜ್ಞಾನ ಶಿಕ್ಷಕಿಯರು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ವನ ಮುಂತಾದುವುಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರಜ್ಞೆಯನ್ನು ಮೆರೆದರು. ಶಾಲೆಯ ಪ್ರಾಂಶುಪಾಲೆ ಗೀತಾ ಕಿಣಿ ಮಾರ್ಗದರ್ಶನ ನೀಡಿದರು.

error: