May 5, 2024

Bhavana Tv

Its Your Channel

ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಭಟ್ಕಳ: ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಜರುಗಿದೆ.
ಮಂಗಳೂರು ಮೂಲದ ಪ್ರವಾಸಿಗ ಉದಯಕುಮಾರ್ ಎಂಬುವವರು ಇಲ್ಲಿನ ಕಡಲತೀರದಲ್ಲಿ ಬುಧವಾರ ಸಂಜೆ ಈಜಲು ತೆರಳಿದ್ದರು. ಅವರು ಮೊದಲು ಆರಾಮವಾಗಿಯೇ ಈಜಿದರಾದರೂ ಬರಬರುತ್ತಾ ಅಲೆಗಳ ಅಬ್ಬರಕ್ಕೆ ಕೈ-ಕಾಲುಗಳು ನಿತ್ರಾಣವಾಗಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಜಯರಾಮ್, ಸತೀಶ್, ಸಚಿನ್ ಹಾಗೂ ಪಾಂಡು ಎಂಬುವವರು ಕೂಡಲೇ ಬೋಟ್ ಮೂಲಕ ತೆರಳಿ ಪ್ರವಾಸಿಗನನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: