May 6, 2024

Bhavana Tv

Its Your Channel

ವಿವಿಧ ಪ್ರಕರಣಕ್ಕೆ ಸಂಬOಧಿಸಿದ ಆರೋಪಿಗಳ ಹೆಡೆಮುರಿ‌ಕಟ್ಟಿದ ಶಿರಸಿ ಪೊಲೀಸರು

ಶಿರಸಿ: ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಪೊಲೀಸರು ವಿವಿಧ ಪ್ರಕರಣಕ್ಕೆ ಸಂಬOಧಿಸಿ ಆರೋಪಿತರನ್ನು ಹೆಡೆಮುರಿಕಟ್ಟುತ್ತಿದ್ದಾರೆ. ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆದು ೪೩ ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರು ಶಿರಸಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ತೆಲಂಗಾಣದಲ್ಲಿ ದಾಖಲಾಗಿದ್ದ ದೂರಿನನ್ವಯ ಅಲ್ಲಿನ ಪೊಲೀಸರು ಶಿರಸಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ತೆಲಂಗಾಣ ಪೊಲೀಸರು ಶಿರಸಿ ಪೊಲೀಸರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಬಂಧಿತ ಆರೋಪಿ ಮೊಹಮದ್ ಇಬ್ರಾಹಿಂ ಕಲಬುರ್ಗಿ ಎಂದು ತಿಳಿದುಬಂದಿದೆ.
ಕಾರ್ ಬ್ರೋಕರ್ ಆಗಿರುವ ಮೊಹಮದ್, ಶಿರಸಿ ತಾಲೂಕಿನ ರಾಮನಬೈಲ್ ನಿವಾಸಿ ತಂದು ತಿಳಿದುಬಂದಿದೆ. ಆರೋಪಿಯ ಪತ್ತೆಗೆ ಶಿರಸಿ ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಸಹಕಾರ ನೀಡಲಾಗಿತ್ತು

error: