ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿ ತಾಲೂಕಿನ ಕಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.ಈ ಪಂದ್ಯಾವಳಿಯಲ್ಲಿ 804 ಶಾಲೆಗಳು ಪಾಲ್ಗೊಂಡಿದ್ದವು.ಶಿರಸಿಯ ಕಲ್ಲಿ ಮುರಾರ್ಜಿ ವಸತಿ ಶಾಲೆಯ ತಂಡವು ಬೆಂಗಳೂರು, ಕಲಬುರ್ಗಿ ಹಾಗು ಮೈಸೂರು ವಿಭಾಗವನ್ನು ಸೋಲಿಸಿ ಪ್ರಥಮ ಸ್ಥಾನಗಳಿಸಿದೆ.ಶಿರಸಿ ತಂಡದಲ್ಲಿ ಶುಭಾನ ಅಲಿ,ಶರತ್,ಗಿರೀಶ,ವಿಷ್ಣು,ಆಶಿಫ್,ಕೌಶಿಕ್,ಪ್ರಸನ್,ಶಸಾಂಕ,ಮದನ್,ಗಜೇAದ್ರ,ಆದಿತ್ಯ ಭಾಗವಹಿಸಿದ್ದರು.ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಮನೋಹರ ಎಲ್ ನಾಯ್ಕ ಹಾಗು ಸಂತೋಣ ಗುಡಾಜಿ ತರಬೇತಿ ನೀಡಿದ್ದರು.ಮಕ್ಕಳ ಸಾಧನೆಗೆ ಪ್ರಾಂಶುಪಾಲರಾದ ರಾಘವೇಂದ್ರ ಎ ಹಾಗೂ ಯುವಜನ ಸೇವಾಕ್ರೀಡಾ ಇಲಾಖೆ ವಿದ್ಯಾನಗರ ಬೆಂಗಳೂರು ಅಭಿನಂದನೆ ಸಲ್ಲಿಸಿದ್ದಾರೆ.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ