May 6, 2024

Bhavana Tv

Its Your Channel

“ಪಾಕಬ್ರಹ್ಮ” ನಾರಾಯಣ ಹೆಗಡೆ ( 94) ಬೆಂಡೆಗದ್ದೆ ನಿಧನ

ಸಿರ್ಸಿ. ಉತ್ತರಕನ್ನಡ ಜಿಲ್ಲೆಯ ಸಿರಸಿಯ ಪ್ರಸಿದ್ಧ ಬಂಡೆಗದ್ದೆ ಖಾನಾವಳಿ ಎಂದೇ ಹೆಸರು ಪಡೆದಿದ್ದ ಇದರ ಮಾಲಿಕರಾಗಿದ್ದ ಪ್ರಖ್ಯಾತ ಬಾಣಸಿಗರಾಗಿದ್ದ, “ಪಾಕಬ್ರಹ್ಮ” ನಾರಾಯಣ ಹೆಗಡೆ ( 94) ಬೆಂಡೆಗದ್ದೆ ಇವರು ವಯೋಸಹಜ ಕಾರಣಗಳಿಂದ ದೈವಾಧೀನರಾಗಿದ್ದಾರೆ. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರು ತಯಾರಿಸುತ್ತಿದ್ದ ಜಿಲೇಬಿ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದು ಬಹಳ ಬೇಡಿಕೆ ಪಡೆದಿತ್ತು. ಅವರ ಆತ್ಮಕ್ಕೆ ಸದ್ಗತಿ ಮತ್ತು ಶಾಂತಿ ಸಿಗಲಿ ಎಂದು ಸಾರ್ವಜನಿಕರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

error: