April 30, 2024

Bhavana Tv

Its Your Channel

ಹೊನ್ನಾವರದಲ್ಲಿ ಶೈಕ್ಷಣಿಕ ಸಮ್ಮೇಳನ

ಕರ್ನಾಟಕ ಮಾಧ್ಯಮಿಕ ಶಾಲಾ ಹಾಗೂ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಹಾಗೂ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶೈಕ್ಷಣಿಕ ಸಮ್ಮೇಳನ ನಡೆಯಿತು.

ಉದ್ಘಾಟಕರಾಗಿ ಆಗಮಿಸಿದ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಹರೀಶ್ ಗಾಂವಕರ ಇವರು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದೆ. ಆದ್ದರಿಂದ ಶಿಕ್ಷಕರು ಕೌಶಲ್ಯವನ್ನು ಹೆಚ್ಚಿಸಿಕೊಂಡು ಅಧ್ಯಯನ ಶೀಲರಾಗಿ ಬೋಧಿಸಬೇಕು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷರಾದ ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಈಶ್ವರ ನಾಯ್ಕ ಇವರು ಕರ್ತವ್ಯವನ್ನು ಗೌರವಿಸುತ್ತಾ ಗೌರವಕ್ಕೆ ಪಾತ್ರರಾಗಬೇಕು ಎಂದು ಕರೆ ನೀಡಿದರು. ವಿಶೇಷ ಉಪನ್ಯಾಸ ನೀಡಿದ ಎಸ್ ಡಿ ಎಮ್ ಸಿ ಕಾಲೇಜಿನ ಉಪನ್ಯಾಸಕರಾದ ಪ್ರೊ.ಎಮ್ ಆರ್‌ ನಾಯಕ ಇವರು ಭವಿಷ್ಯದ ಬದುಕಿಗೆ ಇಂದಿನ ಶಿಕ್ಷಣ ಪೂರಕವೇ ಎನ್ನುವ ವಿಷಯದ ಕುರಿತು ಮಾತನಾಡುತ್ತಾ ಶಿಕ್ಷಣದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಮೂಲಕ ದೇಶ ಕಟ್ಟುವ ಕೆಲಸ ಆಗಬೇಕು ಹಾಗೂ ಸುಶೀಕ್ಷಿತರೇ ದೇಶದ ಅಭಿವೃದ್ಧಿಗೆ ಕಳಂಕತರುತ್ತಿದ್ದಾರೆ. ಎಂಬ ಅಭಿಪ್ರಾಯ  ವ್ಯಕ್ತಪಡಿಸಿದರು.  ಸಮಾರಂಭದಲ್ಲಿ ಪ್ರಕಾಶ್ ನಾಯ್ಕ, ಪ್ರಭಾಕರ ಬಂಟ್, ಎಲ್ ಎಮ್ ಹೆಗಡೆ, ಎಮ್ ಟಿ ಗೌಡ, ಆರ್‌ ಟಿ ನಾಯ್ಕ,  ಸುಧೀರ ನಾಯ್ಕ. ಕೆ ಸಿ ವರ್ಗೀಸ್‌. ಸಂತೋಷಕುಮಾರ, ಮಹೇಶ ಶೆಟ್ಟಿ. ಬಿ. ಎಮ್. ಭಟ್. ಜಿ. ಎಚ್‌. ನಾಯ್ಕ, ರಾಮ ಗೊಂಡ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಭಟ್ ಸ್ವಾಗತಿಸಿದರೆ  ಸತೀಶ್ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಜಿ ಆರ್ ಶೆಟ್ಟಿ ಹಾಗೂ ಪ್ರಕಾಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಜಿ ನಾಯ್ಕ ವಂದಿಸಿದರು.

error: