April 26, 2024

Bhavana Tv

Its Your Channel

ಭಟ್ಕಳ ಶೆಡ್ಕುಳಿ ಗ್ರಾಮಕ್ಕೆ ಹೊಸ ರಸ್ತೆ ನಿರ್ಮಿಸಿಕೊಡಿ: ಸ್ಥಳೀಯರ ಮನವಿ

ಭಟ್ಕಳ ತಾಲೂಕಿನ ಶೇಡ್‌ಕುಳಿಹೊಂಡದ ನಿವಾಸಿಗಳು ಹೊಸ ರಸ್ತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿ ಜಾಲಿಪಟ್ಟಣ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ ೧೦ ವರ್ಷಗಳಿಂದ ಈ ಗ್ರಾಮಕ್ಕೆ ಪಟ್ಟಣ ಪಂಚಾಯಿತಿಯಾಗಲಿ ಅಥವಾ ಇನ್ನುಳಿದ ಯಾವುದೇ ಚುನಾಯಿತ ಪ್ರತಿನಿಧಿಗಳಿಂದಾಗಲಿ ಯಾವುದೇ ತರಹದ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಜಾಲಿ ಗ್ರಾಮ ಪಂಚಾಯತ್ ಮೇಲ್ದರ್ಜೆಯಾಗಿ ಪಟ್ಟಣ ಪಂಚಾಯತ್ ಆದಾಗಿನಿಂದಲೂ ಈವರೆಗೆ ಸುಮಾರು ೮.೫ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಒಂದು ರೂಪಾಯಿಯನ್ನೂ ಶೆಡಕುಳಿ ಹೊಂಡದ ಗ್ರಾಮಸ್ಥರ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಿಲ್ಲ ಎಂದು ಆರೋಪಿಸಿದ್ದಾರೆ.ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ ಸ್ಥಳೀಯರು ಆಜಾದ್ ನಗರದಲ್ಲಿ ಒಟ್ಟು ೪ ಸದಸ್ಯರಿದ್ದು ಈವರೆಗೂ ಈ ಬಗ್ಗೆ ಕಾಳಜಿವಹಿಸದೇ ಇರುವುದು ಗ್ರಾಮಸ್ಥರಿಗೆ ತುಂಬಾ ನೋವುಂಟಾಗಿದೆ. ಈ ಗ್ರಾಮಕ್ಕೆ ಒಟ್ಟು ೧ ಕಿಲೋಮೀಟರ್ ರಸ್ತೆ ಅವಶ್ಯಕವಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಮತ್ತು ಹಿರಿಯ ನಾಗರಿಕರಿಗೆ ತುಂಬಾ ತೊಂದರೆಗಳಾಗುತ್ತಿದೆ. ಶಾಲಾ ವಾಹನಗಳು ಈ ರಸ್ತೆಯಲ್ಲಿ ಬಾರದೇ ವಾಪಸ್ಸು ತೆರಳುತ್ತಿದ್ದು,ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾರೆ. ಸಮಸ್ಯೆಯನ್ನು ಅರಿತು ಈ ಗ್ರಾಮದ ರಸ್ತೆ ನಿರ್ಮಿಸಿ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುವ ಪರಿಸ್ಥಿತಿ ಉದ್ಭವವಾಗುತ್ತದೆ. ಗ್ರಾಮಸ್ಥರ ಮನವಿ ಅರ್ಜಿಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮನವಿಯನ್ನು ಜಾಲಿ ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ ಶಾಸ್ತ್ರೀ ಸ್ವೀಕರಿಸಿದರು.

error: