March 15, 2025

Bhavana Tv

Its Your Channel

ವಿಶ್ವ ಭೂಮಿ ದಿನಾಚರಣೆಯನ್ನು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಣೆ

ಭಟ್ಕಳ: ಮಂಗಳವಾರದAದು ತಾಲೂಕು ಕಾನೂನು ಸೇವಾ ಸಮಿತಿ ಭಟ್ಕಳ, ವಕೀಲರ ಸಂಘ ಅಭಿಯೋಜನೆ ಇಲಾಖೆ, ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಭೂಮಿ ದಿನಾಚರಣೆಯನ್ನು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.”
ಸಂಸ್ಥೆಯ ಟ್ರಸ್ಟಿ, ಪುಷ್ಪಲತಾ ಎಮ್ ವೈದ್ಯ, ಫವ್ವಾಜ್ ಪಿ.ಎ. ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು (ಜೂನಿಯರ್ ವಿಭಾಗ )ಮತ್ತು ಜೆ.ಎಮ್. ಎಫ್ ಸಿ ನ್ಯಾಯಾಲಯ ಭಟ್ಕಳ,ಎಮ್.ಎಲ್.ನಾಯ್ಕ ಅಧ್ಯಕ್ಷರು, ವಕೀಲರ ಸಂಘ ಭಟ್ಕಳ, ಜೆ.ಡಿ.ಭಟ್, ಕಾರ್ಯದರ್ಶಿ ವಕೀಲರ ಸಂಘ ಭಟ್ಕಳ, ಶ್ರೀ ಎಸ್.ಕೆ.ನಾಯ್ಕ ಉಪಾಧ್ಯಕ್ಷರು, ವಕೀಲರ ಸಂಘ ಭಟ್ಕಳ, ನೋಟರಿ ವಕೀಲರುಆರ್.ಆರ್ ಶ್ರೇಷ್ಠಿ ಮತ್ತು ಮಹೇಶ ಆರ್ ನಾಯ ್ಕ. ಶರತ್ ಶೆಟ್ಟಿ ವಲಯ ಅರಣ್ಯಾಧಿಕಾರಿ ಭಟ್ಕಳ, ಅರಣ್ಯ ಇಲಾಖೆಯ ಹಲವಾರು ಸಿಬ್ಬಂದಿ ವರ್ಗದವರು ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು , ವಿದ್ಯಾರ್ಥಿಗಳು ಹಾಜರಿದ್ದು ಈ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನೇರವೇರಿಸಿದರು. ನ್ಯಾಯಧೀಶರು ಕಾರ್ಯಕ್ರಮವನ್ನು ಉಧ್ಘಾಟಿಸಿ ವಿಶ್ವ ಭೂ ದಿನಾಚರಣೆಯ ಶುಭಾಶ಼ಯವನ್ನು ಕೋರುತ್ತಾ ಮಾತನಾಡಿ, ಸಂಸ್ಥೆಗೆ ಪರಿಸರ ಮತ್ತು ಅದರ ಸರಂಕ್ಷಣೆಯ ಬಗ್ಗೆ ಇರುವ ಕಾಳಜಿಯನ್ನು ಮತ್ತು ಜನಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಸಂಸ್ಥೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಆಗಮಿಸಿದ ಗೌರವಾನ್ವಿತ ನ್ಯಾಯಧೀಶರು ಮೆಚ್ಚುಗೆ ವ್ಯಕ್ತ ಪಡಿಸಿದರು.

error: