ಗುಂಡ್ಲುಪೇಟೆ ತಾಲೂಕಿನ ಚನ್ನ0ಜಯ್ಯನಹುಂಡಿ ಗ್ರಾಮದ ಅಭಿವೃದ್ಧಿಗೆ ಶಾಸಕರಾದ ಸಿ.ಎಸ್ ನಿರಂಜನ್ ಕುಮಾರ್ ರವರಿಂದ ಒಂದು ಕೋಟಿ ಅರವತ್ತು ಲಕ್ಷದ ಅನುದಾನ.
ಗ್ರಾಮದ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗು ದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಂತರ ಮಾತಾಡಿದವರು ಸುಮಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಕೆಲಸವನ್ನು ಮಾಡುತ್ತಿದ್ದೇವೆ . ಅಲ್ಲದೆ ಯಾವ ಸಮಾಜದವರನ್ನು ಕಡೆಗಣಿಸದೆ ಎಲ್ಲಾ ಸಮಾಜದ ಏಳಿಗೆಗೆ ಶ್ರಮಿಸಲಾಗುತ್ತಿದೆ ಮತ್ತು ನಮ್ಮ ಈ ನಾಲ್ಕು ವರ್ಷದ ಅವಧಿಯಲ್ಲಿ 700 ಕೋಟಿ ಅನುದಾನವನ್ನು ತಾಲೂಕಿನ ಅಭಿವೃದ್ಧಿಗೆ ತಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಿಸೆಂಬರ್ 12ರಂದು ಶಾಸಕರ ಹುಟ್ಟು ಹಬ್ಬ ಇರುವುದರಿಂದ ಮುಂಚಿತವಾಗಿ ಗ್ರಾಮಸ್ಥರು ವೇದಿಕೆಯಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ದೊಡ್ದ ಹುಂಡಿ ಜಗದೀಶ್, ಹಿರಿಕಾಟಿ ಸೋಮಶೇಖರ್, ನಿಟ್ರೆ ನಾಗರಾಜ ಪ್ಪ, ಶಿವಬಸಪ್ಪ ಹೋರೆಯಲ, ಎಪಿಎಂಸಿ ಅಧ್ಯಕ್ಷ ರವಿ , ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹೇಶ್, ಮಾಜಿ ತಾಲೂಕು ಪಂಚಾಯತಿ ಸದಸ್ಯ ಸಿ.ಮಹಾದೇವ ಪ್ರಸಾದ್, ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಲೋಕೇಶ್,ಗ್ರಾಮ ಪಂಚಾಯತಿ ಅಧ್ಯಕ್ಷರು ,ಸದಸ್ಯರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ ಪ್ರಣಯ್, ನಾಗೇಂದ್ರ ಮಾಡ್ರಹಳ್ಳಿ ,ಡಿ. ಮಹೇಶ್, ಹಾಗೂ ಗ್ರಾಮದ ಮುಖಂಡರು ಗಳು, ಯುವಕರುಗಳು ಉಪಸ್ಥಿತರಿದ್ದರು.
More Stories
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ