March 18, 2025

Bhavana Tv

Its Your Channel

ಸುಸಂಪನ್ನವಾದ “ಝೇಂಕಾರ ಸಾಂಸ್ಕೃತಿಕ ಸಂಭ್ರಮ – 2023”

????????????????????????????????????

ಭಟ್ಕಳ:- ಶ್ರೀಮಂತ ವರ್ಗದವರು ಮಾತ್ರ ಕಲಿಯುತ್ತಿದ್ದ ಲಲಿತಕಲಾ ಕಲಿಕೆಗಳನ್ನು ಸಾಮಾನ್ಯ ಬಡ ವರ್ಗದವರು ಕಲಿಯುವಂತೆ ಮಾಡಿದ ಝೇಂಕಾರ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎಂದು ಭಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ಸವಿತಾ ಕಾಮತ ಅಭಿಪ್ರಾಯ ಪಟ್ಟರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜರುಗಿದ ಝೇಂಕಾರ ಸಾಂಸ್ಕೃತಿಕ ಸಂಭ್ರಮ -2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಲಲಿತ ಕಲೆಗಳ ಮೂಲಕ ಭಟ್ಕಳದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಪಸರಿಸಿದ ಹೆಗ್ಗಳಿಕೆ ಝೇಂಕಾರ ಸಂಸ್ಥೆಗೆ ಸಲ್ಲುತ್ತದೆ ಎಂದರು.

ಸಂಜಯ ಗುಡಿಗಾರ ನಿರ್ದೇಶನದಲ್ಲಿ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನವನ್ನು ಶಿರಾಲಿಯ ಸಮಾಜ ಸೇವಕ ಶ್ರೀ ವಿಷ್ಣು ಶ್ಯಾನಭಾಗ ಉದ್ಘಾಟಿಸಿ ಮಾತನಾಡಿದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಸಕ್ತ ಸಾಲಿನಲ್ಲಿ ಝೇಂಕಾರ ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಸಭೆಯಲ್ಲಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಂಶುಪಾಲ ಎ. ಬಿ. ರಾಮರಥ ಮಾತನಾಡುತ್ತಾ ಮೊಬೈಲ ನೋಡಿ ಸಮಯ ವ್ಯರ್ಥ ಮಾಡುವ ಮಕ್ಕಳ ಮನಸ್ಸಿನಲ್ಲಿ ಸಂಗೀತ ನೃತ್ಯ ಕಲೆಗಳ ಮೇಲೆ ಆಸಕ್ತಿ ಮೂಡಿಸುವ ಕೆಲಸ ಝೇಂಕಾರ ಕಲಾ ಸಂಘ ಮಾಡುತ್ತಿದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ಪ್ರಸನ್ನ ಪ್ರಭು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಲಲಿತ ಕಲೆಗಳು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಶಿಕ್ಷಣಕ್ಕೂ ಸಹಕಾರಿಯಾಗಿವೆ ಎನ್ನುತ್ತಾ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಖ್ಯಾತ ಮೃದಂಗ ವಾದಕರಾದ ಪದ್ಮರಾಜ ಭಟ್ಟ ಇವರ ಕಲಾ ಸೇವೆಯನ್ನು ಗುರುತಿಸಿ ಝೇಂಕಾರ ಕಲಾಶ್ರೀ-2023 ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಬಹುಮುಖ ಪ್ರತಿಭೆಯ ಕಲಾವಿದೆಯಾದ ಡಾ|| ಸವಿತಾ ಕಾಮತ ಇವರನ್ನೂ ಗೌರವಿಸಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಜರುಗಿದ ನೃತ್ಯ ವಿದೂಷಿ ನಯನಾ ಪ್ರಸನ್ನ ನಿರ್ದೇಶನದ ಭರತನಾಟ್ಯ ನೃತ್ಯ ರೂಪಕಗಳು ಹಾಗೂ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ಕಲಾಸಕ್ತರ ಮನರಂಜಿಸಿತು. ಸಂಸ್ಥೆಯ ಸದಸ್ಯರಾದ ರಾಮದಾಸ ದೇವಡಿಗ ಸ್ವಾಗತಿಸಿದರು. ಸಂಜಯ ಗುಡಿಗಾರ ಹಾಗೂ ನಯನಾ ಪ್ರಸನ್ನ ಕಾರ್ಯಕ್ರಮವನ್ನು ನಿರ್ವಹಿಸಿದರು.

error: