ಭಟ್ಕಳ; ತಾಲ್ಲೂಕಿನ ಜಯಮಾರುತಿ ರಕ್ತದಾನ ಬಳಗ ಹಾಗೂ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಂಯುಕ್ತ ಆಶ್ರಯ ದಲ್ಲಿ ರಕ್ತದಾನ ಶಿಬಿರ ಭಾನುವಾರ ನಡೆಯಿತು.
ಭಟ್ಕಳ ಚನ್ನಪಟ್ಟಣ ದೇವಸ್ಥಾನದ ಎದುರು ಇರುವ ಶ್ರೀ ವೀರಾಂಜನೇಯ ಸಭಾಂಗಣದಲ್ಲಿ ಬೆಳಗ್ಗೆ 8:30 ರಿಂದ ಆರಂಭವಾದ ಶಿಬಿರ ಮಧ್ಯಾಹ್ನ 2 ಘಂಟೆ ವರೆಗೆ ರವರೆಗೆ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಒಟ್ಟು 71 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ ಅವರನ್ನು ರಕ್ತದಾನಕ್ಕೆ ಪ್ರೋತ್ಸಾಹಿಸುವ ಅವಿರತ ಪ್ರಯತ್ನಕ್ಕಾಗಿ ಜಯಮಾರುತಿ ರಕ್ತದಾನ ಬಳಗ ಇವರು ಸನ್ಮಾನಿ ಗೌರವಿಸಿದರು.
ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ರಕ್ತವು ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದು ಸತೀಶ್ ಸಾಲಿಯಾನ ತಿಳಿಸಿದರು. ರಕ್ತದಾನ ಮಾಡಿದ ಎಲ್ಲರಿಗೂ ಶಿಬಿರದ ಆಯೋಜಕರು ಧನ್ಯವಾದ ಅರ್ಪಿಸಿದರು. ಶಿಬಿರ ಯಶಸ್ವಿಯಾಗಿದ್ದು,ಮುಂದೆ ಇನ್ನಷ್ಟು ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದಾಗಿ ಎಂದು ಜಯಮಾರುತಿ ರಕ್ತದಾನ ಬಳಗದ ಗಣೇಶ ದೇವಡಿಗ ಹೇಳಿದರು.
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: