ಮಂಡ್ಯ(ಡಿ.೨೮):ಕೃಷ್ಣರಾಜಪೇಟೆ ತಾಲ್ಲೂಕಿನ ಶ್ರೀ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೧ನೇ ಸಾಲಿನ ದಿನದರ್ಶಿಕೆಯನ್ನು ಸಂಘದ ಅಧ್ಯಕ್ಷರಾದ ಕೆ.ಎಸ್.ಕುಮಾರ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು .
ಕೃಷ್ಣರಾಜಪೇಟೆ ಪಟ್ಟಣದ ಅಗ್ರಹಾರದಲ್ಲಿರುವ ಶ್ರೀ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ೨೦೨೧ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂಘದ ಅಧ್ಯಕ್ಷ ಕುಮಾರ್ ಹಾಗೂ ಪದಾಧಿಕಾರಿಗಳು ತಾಲ್ಲೂಕಿನ ಸಮಸ್ತ ಜನತೆಗೆ ಕುಮಾರ್ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು ..
ಕಳೆದ ೭ ವರ್ಷಗಳಿಂದ ನಿರಂತರವಾಗಿ ಪಂಚಾAಗವನ್ನು ಒಳಗೊಂಡಿರುವ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿಕೊಂಡು ಬರಲಾಗುತ್ತಿದೆ. ಸಮಾಜದ ಮುಖಂಡರು ಹಾಗೂ ಪಟ್ಟಣದ ವರ್ತಕರು ಜಾಹಿರಾತು ನೀಡುವ ಮೂಲಕ ಕ್ಯಾಲೆಂಡರ್ ಮುದ್ರಣಕ್ಕೆ ಸಹಕರಿಸಿದ್ದಾರೆ. ಹಾಗೂ ಸಮಾಜದ ಬಂಧುಗಳು ನಮ್ಮ ಸಂಘದ ಸಮಾಜಮುಖಿ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಆದ್ದರಿಂದ ಸರ್ವರಿಗೂ ಆಭಾರಿಯಾಗಿರುವುದಾಗಿ ಕುಮಾರ್ ಹೇಳಿದರು…
ಈ ಸಂದರ್ಭದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ರಾಜೇಗೌಡ, ಗೌರವಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ, ಮಾಜಿಅಧ್ಯಕ್ಷ ಸಿದ್ಧ, ಕಾನೂನು ಸಲಹೆಗಾರ ಕೆ.ಎನ್.ದೊಡ್ಡಯ್ಯ, ಖಜಾಂಚಿ ಕೆ.ಸಿ.ಸಂದೀಪ, ತಾಂತ್ರಿಕ ಸಲಹೆಗಾರ ಎಂ.ಎಸ್.ವಿಶ್ವನಾಥ್, ನಿರ್ದೇಶಕರಾದ ಕೆ.ಶ್ರೀನಿವಾಸ್, ಕೆ.ಎನ್.ಕಾಳೇಗೌಡ, ಬಸವರಾಜು, ಕೆ.ಹೆಚ್.ಮಂಜುನಾಥ್, ಕೆ.ಶಿವಕುಮಾರ್, ಕೆ.ಮಂಜುನಾಥ್, ಕೆ.ಉಮೇಶ್, ಎಸ್.ರಾಜು, ಕೆ.ಎನ್.ಯೋಗೇಶ್ ಹಾಗೂ ಗ್ರಾಮದ ಮುತ್ತುರಾಯ ದೇವಾಲಯದ ಪ್ರಧಾನ ಅರ್ಚಕರಾದ ಮುತ್ತುರಾಜು ಭಾಗವಹಿಸಿದ್ದರು….
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ