April 30, 2024

Bhavana Tv

Its Your Channel

ಕೊರೊನಾ ಸಂಕಷ್ಟದ ನಡುವೆ ಕಾಡಾನೆಗಳ ದಾಳಿ. ಸುಮಾರು ೪ ಲಕ್ಷ ಮೌಲ್ಯದ ಬೆಳೆ ನಾಶ ಪಡಿಸಿರುವ ಆನೆಗಳ ಹಿಂಡು.

ಕೋಲಾರ ; ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಶ್ರೀನಿವಾಸನಗರ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿದ್ದು ಕೇವಲ ಅರ್ಧ ಗಂಟೆಯಲ್ಲೇ ಧ್ವಂಸ ಮಾಡಿದೆ. ರೈತರಿಗೆ ಸೇರಿದ ಬೋರ್ ವೆಲ್, ಪೈಪ್ ಗಳನ್ನು ಸಹ ನಾಶ ಮಾಡಿದ್ದು ಮೂರು ಎಕರೆ ಟಮೋಟೊ, ಒಂದು ಎಕರೆ ಜೋಳ ನಾಶ ಮಾಡಿದೆ, ರೈತ ರಾಮಪ್ಪಗೆ ಸೇರಿದ ೩ ಎಕರೆ ಬೀನ್ಸ್. ರೈತ ಬಸವರಾಜ್‌ಗೆ ಸೇರಿದ ಎರಡು ಎಕರೆ ಟಮೋಟ, ರೈತ ತ್ಯಾಗರಾಜು ಗೆ ಸೇರಿದ ಸುಗಂದ ರಾಜ ಹೂ ತೋಟ ನಾಶ ಮಾಡಿದೆ. ಇದೇ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ನಾಶ ಪಡಿಸುತುದ್ದು ಅರಣ್ಯ ಇಲಾಖೆ ವಿರುದ್ದ ರೈತರ ಆಕ್ರೋಶ ಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಬೇಕೆಂದು ರೈತರ ಆಗ್ರಹ.,

ವರದಿ ; ವಿ ರಾಮಕೃಷ್ಣ ಮುಳಬಾಗಿಲು, ಕೋಲಾರ

error: