May 5, 2024

Bhavana Tv

Its Your Channel

ಇಮ್ಯುನಿಟಿ ಬೂಸ್ಟರ್ ಔಷಧಿ ಮನೆ ಮನೆಗೆ ವಿತರಣೆ.

ಬಾದಾಮಿ : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು, ಸೇವಾಭಾರತಿ ಬಾದಾಮಿ ಸಹಯೋಗದಲ್ಲಿ ,ಜಗತ್ತಿನಲ್ಲಿ ಕರೋನ ಮಹಾಮಾರಿ ಯ ಎರಡನೇ ಅಲೆ ಹೆಚ್ಚಾಗುತ್ತಿದೆ,ಇದಕ್ಕೆ ನಮ್ಮ ಕರುನಾಡು ತತ್ತರಿಸಿ ನಲುಗಿ ಹೋಗಿದೆ ಇಷ್ಟೇ ಅಲ್ಲದೆ ಸಾವಿನ ಸಂಖ್ಯೆಗಳು ಕೂಡ ಅಷ್ಟೇ ಹೆಚ್ಚುತ್ತಿವೆ.ಅದಕ್ಕಾಗಿಯೇ ಕರೋನ ವಿರುದ್ಧ ಹೋರಾಡಲು ಬಾದಾಮಿ ತಾಲ್ಲೂಕಿನ ಚೋಳಚಗುಡ್ಡ ಗ್ರಾಮದಲ್ಲಿ ಕೊಲ್ಲಾಪುರದ ಕನ್ನೇರಿ ಮಠದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇಮ್ಯುನಿಟಿ ಬೂಸ್ಟರ್ ಔಷಧಿ ಯನ್ನ ಮನೆ ಮನೆಗೆ ವಿತರಿಸಲಾಯಿತು. ಈ ಕಾರ್ಯದಲ್ಲಿ ಆರ್. ಎಸ್. ಎಸ್.ನ ಸ್ವಯಂ ಸೇವಕರಾದ… ಎಸ್ ಬಿ ಪವಾಡಶೆಟ್ಟಿ, ಪ್ರವೀಣ್, ಮುದಕನಗೌಡರ, ಸುಭಾಸ್, ಮಂಜು, ವೆಂಕಟೇಶ್ ಮುಂತಾದ ಯುವಮುತ್ರರು ಪಾಲ್ಗೊಂಡಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: