May 4, 2024

Bhavana Tv

Its Your Channel

ಗ್ರಾಮಪಂಚಾಯಿತಿಗಳ ದೂರದೃಷ್ಟಿ ಯೋಜನೆ ತಯಾರಿಕೆಗೆ ಸಂಬoಧಿಸಿದoತೆ ನಡೆದ ರಾಜ್ಯ ಮಟ್ಟದ ಕಾರ್ಯಾಗಾರ

ವರದಿ: ವೇಣುಗೋಪಾಲ ಮದ್ಗುಣಿ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 8-07-22 ರಂದು ವಿಕಾಸಸೌಧದಲ್ಲಿ ಜರುಗಿದ “ಗ್ರಾಮಪಂಚಾಯಿತಿಗಳ ದೂರದೃಷ್ಟಿ ಯೋಜನೆ” ತಯಾರಿಕೆಗೆ ಸಂಬoಧಿಸಿದoತೆ ನಡೆದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆಯವರು ಭಾಗವಹಿಸಿ ಮಾತನಾಡಿದರು . ಸದರಿ ಕಾರ್ಯಾಗಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್ ಕೆ ಅತೀಕ್, ಉಮಾ ಮಹದೇವನ್ , ನಿರ್ದೇಶಕರು ಎ ಎನ್ ಎಸ್ ಐ ಆರ್ ಡಿ ಲಕ್ಷ್ಮಿಪ್ರಿಯ ಹಾಗೂ ಪಂಚಾಯತ್ ರಾಜ್ ಆಯುಕ್ತಾಲಯ ದ ಆಯುಕ್ತರಾದ ಶಿಲ್ಪಾ ಶರ್ಮ , ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು .

error: