May 10, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ಅವರು ನಮ್ಮ 4 ವರ್ಷದ ಸುದೀರ್ಘ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದನ್ನು ಬುಕ್ಲೆಟ್ ಮೂಲಕ ಪುಸ್ತಕದ ರೂಪದಲ್ಲಿ ನಿಮ್ಮ ನಿಮ್ಮ ಇಲಾಖೆಯ ಅಭಿವೃದ್ಧಿ ಕೆಲಸಗಳನ್ನು ಪುಸ್ತಕದ ರೂಪ ದಲ್ಲಿ ಮಾಡಿ ಎಂದು ಸೂಚಿಸಿದರು.

ತದನಂತರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ಸಂಬAಧಪಟ್ಟ ಅಧಿಕಾರಿಗಳ ಹತ್ತಿರ ಸಮಸ್ಯೆಗೆ ಪರಿಹಾರ ನೀಡಲು ಸೂಚಿಸಿದರು. ಮತ್ತು ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಾಲೂಕು ಉಪಾಧ್ಯಕ್ಷರಾದ ಮಾಡ್ರಹಳ್ಳಿ ನಾಗೇಂದ್ರ ಮಾತನಾಡಿ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ನಿಮ್ಮ ಇಲಾಖೆಯ ಜಾಗವನ್ನ ಖಾಸಗಿ ಅವರು ನಿಮ್ಮ ಇಲಾಖೆಯ ಬೋರ್ಡ್ ಕಿತ್ತುಹಾಕಿ ಒತ್ತುವರಿ ಮಾಡುತ್ತಿದ್ದಾರೆ ಹಾಗಾದರೆ ನಿಮ್ಮ ಕೆಲಸವೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಿಗೆ 7ನೇ ವೇತನ ಆಯೋಗ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳು ಸನ್ಮಾನವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಸಾಗುವಳಿ ಸಮಿತಿಯ ಸದಸ್ಯರಾದ ನಿಟ್ರೆ ನಾಗರಾಜಪ್ಪ , ಎಚ್,ವಿ. ಮಂಜುನಾಥ್, ಸಿ .ಮಹಾದೇವ ಪ್ರಸಾದ್ , ಮಹೇಶ್ ,ಡಿ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

ವರದಿ:ಸದಾನಂದ ಕನ್ನೇಗಾಲ

error: