ಬಾಗೇಪಲ್ಲಿ:- ಸಿ.ಮುನಿರಾಜು ಬೆಂಗಳೂರು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ತಮ್ಮ ೪೩ ನೇ ಹುಟ್ಟಿದ ಹಬ್ಬವನ್ನು ಬಾಗೇಪಲ್ಲಿ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸರಳವಾಗಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟಿದ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿ ತದನಂತರ ಕಾರು ಚಾಲಕರಿಗೆ, ಉಬರ್ ಚಾಲಕರಿಗೆ, ಆಟೋ ಚಾಲಕರಿಗೆ ಸವಿತಾ ಸಮಾಜದ ಕುಟುಂಬಸ್ಥರಿಗೆ, ಟೋಲ್ ಗೆಟ್ ನೌಕರರಿಗೆ
ದಿನಸಿ ಕಿಟ್ಗಳ ವಿತರಣೆ ಮಾಡಿ ಹಾಗೂ ರಸ್ತೆ ಬದಿ ವ್ಯಾಪಾರಸ್ಥರಿಗೆ ಛತ್ರಿ ನೀಡುವ ಮೂಲಕ ಸರಳವಾಗಿ ತಮ್ಮ ೪೩ ನೇ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು.
ತದನAತರ ಮಾತನಾಡಿ ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್ಡೌನ್ ಆದ ಪರಿಣಾಮ ಜನ ಸಾಮಾನ್ಯರು ಪರದಾಡುವಂತ ಸಮಯದಲ್ಲಿ ಶ್ರೀಮಂತರು ದುಂದು ವೆಚ್ಚ ಮಾಡಿ ಜನ್ಮ ದಿನಾಚರಣೆಯನ್ನು ಆಚರಿಸುವ ಬದಲು ಸಮಾಜಕ್ಕೆ ಯಾವುದಾದರೂ ಸಮಾಜ ಸೇವೆ ಮಾಡುವುದರಲ್ಲಿ ತೃಪ್ತಿ ಇದೆ ಅದ್ದರಿಂದ ಬಾಗೇಪಲ್ಲಿ ಕ್ಷೇತ್ರದ ಜನತೆಗೆ ಈ ನನ್ನ ಅಳಿಲು ಸೇವೆ ಮಾಡುತ್ತಿದ್ದೇನೆ. ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ. ಸುಧಾಕರ್ ಅವರ ಹಾದಿಯಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡು ಈ ನನ್ನ ಸೇವೆ ಮಾಡುತ್ತಿದ್ದೇನೆ ಹಾಗೂ ಬಾಗೇಪಲ್ಲಿ ಪಟ್ಟಣದ ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ೧೦,೦೦೦ ರೂಪಾಯಿಗಳು ವಿತರಣೆ ಮಾಡುವ ಮೂಲಕ ತಮ್ಮ ೪೩ ಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಡಿ ಪಿ ಸದಸ್ಯ ಆರ್ ವೆಂಕಟೇಶ್, ಬಾಗೇಪಲ್ಲಿ ತಾಲ್ಲೂಕು ಮಂಡಲಾದ್ಯಕ್ಷ ಆರ್ ಪ್ರತಾಪ್, ಗುಡಿಬಂಡೆ ತಾಲ್ಲೂಕು ಮಂಡಲಾದ್ಯಕ್ಷ ಗಂಗಿರೆಡ್ಡಿ ಉಪಾಧ್ಯಕ್ಷ ಶ್ರೀನಿವಾಸ್,ರಂಗಾರೆಡ್ಡಿ,ನಿರ್ಮಲ,ಮoಜುಳಾ,ವನಜ,ರೂಪಾ.ಕೆ.ಎo.ರಮಾದೇವಿ, ಗoಗುಲಮ್ಮ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್