
ಭಟ್ಕಳ;2ತಿಂಗಳಿನಿಂದ ಲಾಕ್ಡೌನ್ ನಿಂದಾಗಿ ಮುಚ್ಚಲ್ಪಟ್ಟಿರುವ ಭಟ್ಕಳದಲ್ಲಿರುವ ಸುಮಾರು 150ಕ್ಕೆ ಹೆಚ್ಚು ಮಸೀದಿಗಳು ಜೂ.9 ಮಂಗಳವಾರದಿಂದ ಸಾಮೂಹಿಕ ಪ್ರಾರ್ಥನೆಗಾಗಿ ತೆರೆದುಕೊಳ್ಳಲಿವೆ.
ಈ ಕುರಿತಂತೆ ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಹಾಗೂ ಮರ್ಕಝಿ ಖಲಿಫಾ ಜಮಾಅತ್ ನ ಖಾಝಿಗಳು, ಪದಾಧಿಕಾರಿಗಳು ಹಾಗೂ ಮಜ್ಲಿಸೆ ಇಸ್ಲಾಹ್ ವ-ತಂಝೀಮ್ ಸಂಸ್ಥೆಯ ಮುಖಂಡರೊಂದಿಗೆ ಮಾತುಕತೆ
ದೈಹಿಕ ಅಂತರ ಕಾಪಾಡಿಕೊಳ್ಳುವದರ ಮೂಲಕ ಮನೆಯಿಂದಲೆ ವಝೂ(ಅಂಗಸ್ನಾನ) ಮಾಡಿಕೊಂಡು ಬರಬೇಕು, ತಮ್ಮ ತಮ್ಮ ನಮಾಝ್ ಹಾಸುಗಳನ್ನು ಮನೆಯಿಂದಲೆ ತರಬೇಕು, ಮಸೀದಿ ಕಮಿಟಿಯವರು ಮಸೀದಿಯ ದ್ವಾರದಲ್ಲಿ ಸೆನಿಟೈಸರ್ ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸೂಚನೆಯೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಅನುಮತಿಯನ್ನು ನೀಡಿಲಾಗಿದೆ ಎಂದು ತಿಳಿಸಲಾಗಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.