May 15, 2024

Bhavana Tv

Its Your Channel

ಅನಿರ್ದಿಷ್ಟಾವಧಿ ಮುಗ್ವಾ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯ ದರ್ಶನ ಬಂದ್: ಸಾರ್ವಜನಿಕರಿಗೆ ಯಾವುದೇ ರೀತಿಯ ದರ್ಶನ ಸದ್ಯಕ್ಕಿಲ್ಲ- ಆಡಳಿತ ಮಂಡಳಿ ನಿರ್ಧಾರ.


ಹೊನ್ನಾವರ;ಕರೋನಾ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ಜಾರಿಯಾದ ಬಳಿಕ ಸರ್ಕಾರದ ಆದೇಶದಂತೆ ದೇವಾಲಯಗಳಲ್ಲಿ ಸಾರ್ವಜನಿಕ ದರ್ಶನ ವಿಶೇಷ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಇದರಂತೆ ತಾಲೂಕಿನ ಪುರಾಣ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳಾಗಲಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರಲಿಲ್ಲ. ಜೂನ್ ೮ರಂದು ಸರ್ಕಾರದ ಮಾರ್ಗಸೂಚಿಯ ಅನ್ವಯ ದೇವಾಲಯಗಳು ತೆರೆದು ಸುರಕ್ಷತಾ ಕ್ರಮ ಕೈಗೊಂಡು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಿತ್ತು. ಆದರೆ ಶ್ರೀಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣದ ಅಂಗವಾಗಿ ಸ್ಥಳವಕಾಶದ ಸಮಸ್ಯೆ, ಹಾಗೂ ಕಾರ್ಯನಿರ್ವಹಿಸಲು ಸಿಬ್ಬಂದಿಗಳ ಅಭಾವ, ಅರ್ಚಕರ ಸುರಕ್ಷತಾ ದೃಷ್ಟಿಯಿಂದ ದೇವಾಲಯದಲ್ಲಿ ಇನ್ನು ಕೆಲ ದಿನಗಳ ಕಾಲ ದರ್ಶನವಾಗಲಿ, ಅಥವಾ ವಿಶೇಷ ಪೂಜೆಗೆ ಅವಕಶವಿಲ್ಲ ಎಂದು ಮಾಧ್ಯಮದ ಮೂಲಕ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಹೆಗಡೆ ಮಾತನಾಡಿ ಮೂರು ತಿಂಗಳಿನಿoದ ದೇವಾಲಯ ಬಂದ್ ಮಾಡಲಾಗಿತ್ತು. ಈಗ ಆರಂಭಿಸಲು ಸರ್ಕಾರದ ಆದೇಶವನ್ನು ನಾವು ಪಾಲಿಸಲು ಸಮಸ್ಯೆಯಾಗುತ್ತಿದೆ. ನಮ್ಮಲ್ಲಿ ಸಿಬ್ಬಂದಿಗಳ ಅಭಾವ ಹಾಗೂ ಸ್ಥಳದ ಸಮಸ್ಯೆಯಿಂದ ಇನ್ನು ಕೆಲವು ದಿನಗಳ ದರ್ಶನವಾಗಲಿ ವಿಶೇಷ ಸೇವೆಯಾಗಲಿ ದೇವಾಲಯದಲ್ಲಿ ನಡೆಯುದಿಲ್ಲ. ನಾಡಿನ ವಿವಿಧಡೆಯಿಂದ ಭಕ್ತರು ಬರುವುದರಿಂದ ದೇವಾಲಯಕ್ಕೆ ಕೆಲಸಕ್ಕೆ ಬರುವವರು ಭಯಪಡುತ್ತಾರೆ. ಇದೆಲ್ಲವನ್ನು ಗಮನಿಸಿಯೇ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬರಲಾಗಿದೆ. ಮುಂದೆ ದೇವಾಲಯದ ಕಾರ್ಯಕ್ರಮ ಪ್ರಾರಂಭವಾಗುವ ದಿನವನ್ನು ಮಾಧ್ಯಮದ ಮೂಲಕ ತಿಳಿಸಲಾಗುವುದು. ಕರೋನಾ ಶಿಘ್ರ ಗುಣಮುಖವಾಗಲಿ ದೇವಾಲಯದಲ್ಲಿ ಪ್ರತಿನಿತ್ಯ ಪ್ರಾರ್ಥಿಸುತ್ತಿದ್ದು, ಭಕ್ತರು ಅವರ ಮನೆಯಲ್ಲಿಯೇ ಸ್ಮರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಾಲಯದ ಮುಖ್ಯಟ್ರಸ್ಟಿಗಳಾದ ಸುಬ್ರಾಯ ತಿಮ್ಮಣ್ಣ ಹೆಗಡೆ, ಟ್ರಸ್ಟ ಕಾರ್ಯದರ್ಶಿಗಳು ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ ಕೊಂಡದಕೇರಿ ಮ್ಯಾನೇಜರ್ ಸತ್ಯನಾರಾಯಣ ಹೆಗಡೆ ತೋಟಿ, ಸದಸ್ಯ ನಾರಾಯಣ ಹೆಗಡೆ ಉಪಸ್ಥಿತರಿದ್ದರು.

error: