ಕೆ.ಆರ್.ಪೇಟೆ ತಾಲ್ಲೂಕಿನ ಭೂವರಹನಾಥ ಕ್ಷೇತ್ರದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಭೂದೇವಿ ಸಮೇತನಾದ ಶ್ರೀಲಕ್ಷ್ಮೀ ವರಹನಾಥಸ್ವಾಮಿಯ ಶಿಲಾಮೂರ್ತಿಗೆ ವಿಶೇಷ ಪೂಜಾ ಪುರಸ್ಕಾರಗಳು.. ಮುಗಿಲು ಮುಟ್ಟಿದ ಸಂಭ್ರಮ..ಸಾವಿರಾರು ಭಕ್ತರಿಂದ ಸ್ವಾಮಿಯ ಶಿಲಾಮೂರ್ತಿಯ ವೀಕ್ಷಣೆ ಮಾಡಿದರು
ವೈಕುಂಠ ಏಕಾದಶಿಯ ಅಂಗವಾಗಿ ಭೂವರಹನಾಥ ಕಲ್ಲಹಳ್ಳಿಗೆ ಇಂದು ಭಕ್ತರ ದಂಡೇ ಹರಿದು ಬಂದಿತ್ತು..
ಭೂದೇವಿ ಸಮೇತವಾಗಿ ನೆಲೆಸಿರುವ ಶ್ರೀ ಲಕ್ಷ್ಮೀ ಭೂವರಹನಾಥಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದ ಭಕ್ತಾದಿಗಳು ತಮ್ಮ ಕೋರಿಕೆಯ ಈಡೇರಿಕೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವೈಕುಂಠ ಏಕಾದಶಿಯ ಸಂಭ್ರಮದ ಅಂಗವಾಗಿ ಭೂವರಹನಾಥ ದೇವಾಲಯದ ಬಾಗಿಲುಗಳನ್ನು ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು..
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ವಿಶೇಷವಾಗಿ ತಯಾರಿಸಿದ್ದ ಸಿಹಿಪೊಂಗಲ್, ಅವಲಕ್ಕಿ ಉಪ್ಪಿಟ್ಟು ಹಾಗೂ ಬಿಸಿಬೇಳೆಭಾತ್ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು..
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಡಿಗಳಾದ ಶ್ರೀನಿವಾಸ ರಾಘವನ್ ಅವರ ನೇತೃತ್ವದಲ್ಲಿ ಆಗಮಿಕರು ಹಾಗೂ ವಿದ್ವಾಂಸರು ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ