ಕಾರ್ಕಳ:- ಮಾರ್ಚ್ ಹತ್ತರಿಂದ ಪ್ರಾರಂಭವಾಗಿ ಮಾರ್ಚ್ ಇಪ್ಪತ್ತರ ತನಕ ನಡೆಯುವ ಕಾರ್ಕಳ ಉತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನೆ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸ್ವರಾಜ್ ಮೈದಾನದಲ್ಲಿ ಜರುಗಿತು.
ಖ್ಯಾತ ನ್ಯಾಯವಾದಿ ಎಂಕೆ ವಿಜಯಕುಮಾರ್ ಮಾತನಾಡಿ ಕಾರ್ಕಳ ಸುವರ್ಣ ಕಾರ್ಕಳ ವಾಗುತ್ತದೆ. ಜನರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡುವುದು ಮಾತ್ರವಲ್ಲದೆ, ಕಾರ್ಕಳದ ಇತಿಹಾಸ ಹಾಗೂ ವೈಭವವನ್ನು ಹೊರಗಿನವರಿಗೆ ತೋರಿಸಿಕೊಡುವುದು ಕಾರ್ಕಳ ಉತ್ಸವ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವ ಸುನಿಲ್ ಕುಮಾರ್ ಕಳೆದ ವರ್ಷ ಡಿಸೆಂಬರ್ ಆಗಬೇಕಿದ್ದ ಈ ಉತ್ಸವ ಕೋರೋನಾ ಕಾರಣದಿಂದ ಮುಂದೂಡಲ್ಪಟ್ಟಿತು. ಮಾರ್ಚ ತಿಂಗಳ ಹತ್ತರಿಂದ ಪ್ರಾರಂಭವಾದ ಉತ್ಸವ ಇಪ್ಪತ್ತರವರೆಗೆ ನಡೆಯಲಿದೆ..
ಈ ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಭಾಗವಹಿಸಲಿದ್ದು. ಬಹಳ ಯಶಸ್ವಿಯಾಗಿ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಕಳ ತಾಲೂಕಿನ ಎಲ್ಲಾ ಕುಟುಂಬ ಸದಸ್ಯರು ತಮ್ಮ ಮನೆಯ ಕಾರ್ಯಕ್ರಮವಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಧಾರ್ಮಿಕ ಮುಖಂಡರು, ಇಲಾಖಾಧಿಕಾರಿಗಳು , ಪೊಲೀಸ್ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,