May 4, 2024

Bhavana Tv

Its Your Channel

ಕಾರ್ಕಳ ಬಸ್ ನಿಲ್ದಾಣದಲ್ಲಿ ಪರಶುರಾಮ ದೌಡ್ ಗೆ ಚಾಲನೆ ನೀಡಿದ ಸಚಿವ ವಿ.ಸುನಿಲ್‌ಕುಮಾರ್

ಕಾರ್ಕಳ; ಪರಶುರಾಮ ದುಷ್ಟರನ್ನು ಶಿಕ್ಷಿಸಿದ ಮಹಾಪುರುಷ. ಸಾಧ್ಯವಿದಲ್ಲದನ್ನು ಆತ ಸಾಧಿಸಿ ತೋರಿಸಿದ್ದಾನೆ. ಆತನ ಸಂದೇಶ ಇಂದಿನ ಸಮಾಜವಿರೋಧಿ ಕೃತ್ಯ ನಡೆಸುವವರಿಗೆ ಒಂದು ಸಂದೇಶ. ಯುವ ಜನತೆ ಕೂಡ ಆತನ ಸಂದೇಶದAತೆ ಸಮಾಜದ ಕೆಟ್ಟ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.

ದೇಶಭಕ್ತ ಯುವ ಸಂಘಟನೆ ಉಡುಪಿಯ ‘ಟೀಂ ನೇಶನ್ ಪಸ್ಟ್’ ಇದರ ನೇತೃತ್ವದಲ್ಲಿ ಸ್ಥಳಿಯ ಸಂಘಸAಸ್ಥೆಗಳ ಸಹಕಾರದಲ್ಲಿ ನಗರದಲ್ಲಿ ನಡೆಯುವ ಪರಶುರಾಮ ದೌಡ್‌ಗೆ ಅವರು ಚಾಲನೆ ನೀಡಿ ಮಾತನಾಡಿದರು. ‘ಟೀಂ ನೇಶನ್ ಪಸ್ಟ್’ ತಂಡದ ಅದ್ಯಕ್ಷ ಸೂರಜ್ ಮೆಂಡನ್, ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ. ಪುರಸಭೆ ಉಪಾದ್ಯಕ್ಷೆ ಪಲ್ಲವಿ ಪ್ರವೀಣ್, ಬಿಜೆಪಿ ಕ್ಷೇತ್ತಾದ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ವೇದಿಕೆಯಲ್ಲಿದ್ದರು. ಸುಹಾಶ್ ಶೆಟ್ಟಿ ನಿರ್ವಹಿಸಿದರು.

error: