May 5, 2024

Bhavana Tv

Its Your Channel

ಶ್ರೀ ಮಹಾಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಹಾಗೂ ಯಕ್ಷೇಶ್ವರಿ ಪರಿವಾರ ದೇವಸ್ಥಾನದಲ್ಲಿ 9ನೇ ವರ್ಷದ ಪ್ರತಿಷ್ಠಾ ವರ್ಧಂತ್ಯೋತ್ಸವ

ಭಟ್ಕಳ ತಾಲ್ಲೂಕಿನ ಎಕ್ಕೆಗೋಳಿ ಶ್ರೀ ಮಹಾಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಹಾಗೂ ಯಕ್ಷೇಶ್ವರಿ ಪರಿವಾರ ದೇವಸ್ಥಾನ ಮುಟ್ಟಳ್ಳಿ,ತಲಾಂದ ಇದರ 9ನೇ ವರ್ಷದ ಪ್ರತಿಷ್ಠಾ ವರ್ಧಂತ್ಯೋತ್ಸವ ನಡೆಯಿತು.

ಬೆಳಗ್ಗೆ ದೇವತಾ ಪಾರ್ಥನೆ,ಪುಣ್ಯಾಹ ಬ್ರಹ್ಮಕೂರ್ಚ ಹೋಮ ಸಾಮೂಹಿಕ ಗಣಹೋಮ ಹಾಗೂ ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆದವು ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು,
ರಾತ್ರಿ ಮಹಾಪೂಜೆ ನಂತರ ಸಭಾ ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ದೇವಸ್ಥಾನ ಕ್ಕೆ ಸೇವೆ ಸಲ್ಲಿಸುತ್ತಿದ್ದ ಮಾಸ್ತಿ ಗೊಂಡ ಹಾಗೂ ಸತತ ಮೂರು ವರ್ಷದಿಂದ ದಸರಾ ಸಮಯದಲ್ಲಿ ದೇವಸ್ಥಾನದ ಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ನೀಡುತ್ತಿದ್ದ ಶ್ರೀಧರ ನಾಯ್ಕ ಮುಟ್ಟಳ್ಳಿ ಮತ್ತು ದೇವಸ್ಥಾನದ ಆಡಳಿತ ಕಮೀಟಿ ಅಧ್ಯಕ್ಷ ಸಂತೋಷ ನಾಯ್ಕ ಇವರಿಗೆ ಸನ್ಮಾನಿಸಿ ಗೌರವಿಸಿದರು.ರಾತ್ರಿ 9 ಗಂಟೆಗೆ ಅಮೇಜಿಂಗ್ ಸ್ಟೆಪ್ಪೆರ್ಸ ಡಾನ್ಸ್ ಕ್ರೇವ್ ಕಂಚುಗೊಡು ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕರಾದ ಮಂಕಾಳ ವೈದ್ಯ ಅವರಿಗೆ ದೇವಸ್ಥಾನದ ಆಡಳಿತ ಕಮೀಟಿ ಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷರು,ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

error: