May 6, 2024

Bhavana Tv

Its Your Channel

ಐಟಾ ದಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕಾರ್ಯಗಾರ

ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್ ಭಟ್ಕಳ ಶಾಖೆಯುತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಜಾಲಿ ಪ್ರೌಢಶಾಲೆಯಲ್ಲಿ ಮಾರ್ಗದರ್ಶನ ಮತ್ತು ಪ್ರೇರಣಾ ಕಾರ್ಯಗಾರ ಆಯೋಜಿಸಿತ್ತು.
ಸಂಪನ್ಮೂಲ ವ್ಯಕ್ತಿಯಾಗಿಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾದ್ಯಾಪಕ ಹಾಗೂ ಪ್ರೇರಕ ಭಾಷಣಗಾರ ಪ್ರೋ.ಗಾನಿಮ್ ಮೊಹತೆಶಮ್ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ವಿದ್ಯರ್ಥಿಗಳೊಂದಿಗೆ ಮಾತನಾಡಿದಅವರುಗೊತ್ತುಗುರಿಯಿಲ್ಲದಯಾವುದೇ ಕೆಲಸ ಸಮಯ ವ್ಯರ್ಥವನ್ನು ಮಾಡುತ್ತದೆ.ಜೀವನದಲ್ಲಿಗುರಿಯೊಂದಿಗೆ ಮುನ್ನೆಡೆಯಬೇಕು, ಯಾವಾಗಲೂದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು, ಭವಿಷ್ಯಕ್ಕಾಗಿಈಗಿಂದಲೇ ಯೋಜನೆಗಳನ್ನು ರೂಪಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಐಟಾರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಹತ್ತಿರವಿದ್ದು ಗರಿಷ್ಠ ಅಂಕಗಳೊAದಿಗೆ ಎಲ್ಲರೂ ಉತ್ತೀರ್ಣರಾಗಬೇಕು ಎಂದು ಹಾರೈಸಿದರು.
ಐಟಾಉತ್ತಕನ್ನಡಜಿಲ್ಲಾಧ್ಯಕ್ಷಅಲಿಮನೆಗಾರ, ಶಿಕ್ಷಕರಾದ ಅಮ್ಜದ್‌ಇಬ್ಬು ಮತ್ತಿತರರು ಉಪಸ್ಥಿತರಿದ್ದರು.

error: