ಭಟ್ಕಳ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಪತ್ರಕರ್ತ, ಕಿರುಚಿತ್ರ ನಿರ್ಮಾಪಕ, ಬರಹಗಾರ ವಿನಾಯಕ ಬ್ರಹ್ಮೂರು ಈತನಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ವಿನಾಯಕ ಭಟ್ಟ ಓರ್ವ ಪ್ರತಿಭಾವಂತ ಪತ್ರಕರ್ತನ ಜೊತೆಗೆ ಅವನಲ್ಲಿ ಅನೇಕ ರೀತಿಯ ಪ್ರತಿಭೆ ಅಡಗಿತ್ತು. ನಿರ್ದೇಶನ, ಕವಿತೆ, ಕವನ, ಕಥೆ, ಲೇಖನ ಹೀಗೆ ಪ್ರತಿಭಾ ಸಂಪನ್ನನಾಗಿದ್ದ ಓರ್ವ ಪತ್ರಕರ್ತನನ್ನು ಕಳೆದುಕೊಂಡಿದ್ದೇವೆ. ಆತನ ಕುಟುಂಬಕ್ಕೆ ದುಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ರಾಘವೇಂದ್ರ ಹೆಬ್ಬಾರ್ ಮಾತನಾಡಿ ನಮ್ಮ ಸಂಘದ ಓರ್ವ ಸಕ್ರಿಯ ಸದಸ್ಯನಾಗಿದ್ದ ವಿನಾಯಕ ಬ್ರಹ್ಮೂರು ಇನ್ನಿಲ್ಲ ಎನ್ನುವ ಸುದ್ದಿ ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ಕ್ರೀಯಾಶೀಲ ಗೆಳೆಯನನ್ನು ಕಳೆದುಕೊಂಡAತಾಗಿದ್ದು ಆತನ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ ಎಂದು ಹಾರೈಸಿದರು.
ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿ ಶೈಲೇಶ ವೈದ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಸದಸ್ಯ ಫಯ್ಯಾಜ್ ಮುಲ್ಲ, ತಾಲೂಕಾ ಸಂಘದ ಉಪಾಧ್ಯಕ್ಷ ಮೊಹನ ನಾಯ್ಕ, ಇನಾಯತುಲ್ಲಾ ಗವಾಯಿ, ಅತೀಕುರೆಹಮಾನ್ ಶಾಬಂದ್ರಿ, ಸತೀಶಕುಮಾರ್ ನಾಯ್ಕ, ರಿಜ್ವಾನ್ ಗಂಗಾವಳಿ ಉಪಸ್ಥಿತರಿದ್ದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.