ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಕಾಲೇಜು ಉಪನ್ಯಾಸಕರುಗಳಿಗೆ “ಸ್ವಾತಂತ್ರೊö್ಯÃತ್ಸವ ಅಮೃತಮಹೋತ್ಸವ ಸಂಭ್ರಮ” ಎಂಬ ವಿಷಯದ ಕುರಿತು ಸ್ವರಚಿತ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರುಗಳಿಗೆ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿಯೇ ನಡೆಯಲಿದೆ.
ಆಸಕ್ತರು ತಮ್ಮ ಸ್ವರಚಿತ ಕವಿತೆಯನ್ನು ಟೈಪ್ ಮಾಡಿಸಿ ಮೂರುಪ್ರತಿಗಳನ್ನು ನೀಡಬೇಕಾಗಿದ್ದು ಒಂದು ಪ್ರತಿಯಲ್ಲಿ ಮಾತ್ರ ತಮ್ಮ ಹೆಸರು ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಿ ಲಕೋಟೆಯಲ್ಲಿ ತಮ್ಮ ವಿಳಾಸವನ್ನು ಬರೆದು ಪ್ರಾಥಮಿಕ,ಪ್ರೌಢ ಅಥವಾ ಕಾಲೇಜು ವಿಭಾಗ ಎಂದು ಉಲ್ಲೇಕಿಸಬೇಕು. ಕೊಣಾರ ಮತ್ತು ಭಟ್ಕಳ ನಗರ ವಲಯದ ವ್ಯಾಪ್ತಿಯ ಶಿಕ್ಷಕರು, ಉಪನ್ಯಾಸಕರುಗಳು ತಮ್ಮ ಕವನಗಳನ್ನು ಸುರೇಶ ಮುರ್ಡೇಶ್ವರ ಸಿ.ಆರ್.ಪಿ. ಇವರಿಗೆ (ದೂರವಾಣಿ 9972712490,) ಮತ್ತು ಶಿರಾಲಿ ಮತ್ತು ಮಾವಳ್ಳಿ ವಲಯದ ವ್ಯಾಪ್ತಿಯಲ್ಲಿನ ಶಿಕ್ಷಕರು ಮತ್ತು ಉಪನ್ಯಾಸಕರು ನಾಗೇಶ ಮಡಿವಾಳ ಬಿ.ಆರ್.ಪಿ. (ದೂರವಾಣಿ 9448756967) ಇವರ ಬಳಿ ಸೆಪ್ಟೆಂಬರ್ 2ನೇ ತಾರೀಖಿನ ಶುಕ್ರವಾರ ಸಂಜೆ 5 ಗಂಟೆಯ ಒಳಗೆ ತಮ್ಮ ಕವಿತೆಗಳನ್ನು ತಲುಪಿಸುದು. ವಿಜೇತರಿಗೆ ಸೆಪ್ಟೆಂಬರ್ 5 ರಂದು ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಬಹುಮಾನವನ್ನು ವಿತರಿಸಲಾಗುವುದೆಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8310093198, 9141111611 ದೂರವಾಣಿಯನ್ನು ಸಂಪರ್ಕಿಸಬಹುದೆAದು ತಿಳಿಸಿದ್ದಾರೆ.
More Stories
ಕುಂದಾಪುರದಲ್ಲಿ ನಡೆದ ಸಾವಿಷ್ಕಾರ್ ಫೆಸ್ಟ್ ನಲ್ಲಿ ಉತ್ತಮ ಹೆಸರು ಗಳಿಸಿದ ಅಂಜುಮನ್ ಇಂಜಿನಿಯರಿ0ಗ್ ವಿದ್ಯಾರ್ಥಿಗಳು
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ