May 19, 2024

Bhavana Tv

Its Your Channel

ಸಿಕ್ಕ ಪರ್ಸ್ ವಾರಸುದಾರರಿಗೆ ಒಪ್ಪಿಸಿದ ಗ್ರಾಮೀಣ ಪೋಲಿಸ್ ಠಾಣೆ ಸಿ.ಪಿ.ಐ ಚಾಲಕ ದೇವರಾಜ ಮೊಗೇರ: ಸ್ಥಳೀಯರಿಂದ ಮೆಚ್ಚುಗೆ.!

ಭಟ್ಕಳ:ರಸ್ತೆಯಲ್ಲಿ ಸಿಕ್ಕಿದ ನಗದುಳ್ಳ ಪರ್ಸ್ ಅನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಭಟ್ಕಳ ಗ್ರಾಮೀಣ ಠಾಣೆ ಯ ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಪ್ರಾಮಾಣಿಕತೆ ಮೆರೆದಿದ್ದಾರೆ.

ಇಂದು ತಾಲೂಕಿನ ರಘುನಾಥ ರಸ್ತೆ ಮೂಲಕ ಠಾಣೆಗೆ ತೆರಳುವ ವೇಳೆ 3500 ನಗದು ಹಾಗೂ ವ್ಯಕ್ತಿಯ ದಾಖಲೆವುಳ್ಳ ಪರ್ಸ್ ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರಿಗೆ ಸಿಕ್ಕಿತ್ತು. ಬಳಿಕ ಪರ್ಸ್ ನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ಕಳೆದುಕೊಂಡ ವ್ಯಕ್ತಿಗಾಗಿ ಸಂಪರ್ಕಿಸಿದ್ದಾರೆ.

ನಂತರ ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿದ್ದು, ತಾಲೂಕಿನ ರಘುನಾಥ ರಸ್ತೆಯ ಮಣ್ಕುಳಿ ನಿವಾಸಿ ಭಾಸ್ಕರ ನಾಯ್ಕ ಎಂದು ತಿಳಿದು ಬಂದಿದೆ.  ಬಳಿಕ ಅವರನ್ನು ಭಟ್ಕಳ ಗ್ರಾಮೀಣ ಠಾಣೆಗೆ   ಬರಮಾಡಿಕೊಂಡು ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ ಮುಖಾಂತರ ಪರ್ಸ್ ಅನ್ನು ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ

.

error: