May 5, 2024

Bhavana Tv

Its Your Channel

ನಾಳೆ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನಕುಮಾರ ಕಟೀಲ ಭಟ್ಕಳಕ್ಕೆ ಭೇಟಿ

ಭಟ್ಕಳ: ಫೆ.7 ರಂದು ಮಂಗಳವಾರ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನಕುಮಾರ ಕಟೀಲ ಭಟ್ಕಳ ಭೇಟಿ ನೀಡಲಿದ್ದು, ಶಿರಾಲಿಯಲ್ಲಿ ಪಕ್ಷದ ಪ್ರಮುಖರ ಬೃಹತ್ ಸಮಾವೇಶ ನಡೆಯಲಿದೆ ಎಂದು ಭಟ್ಕಳ ಬಿಜೆಪಿ ಘಟಕ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು.

ಅವರು ಭಾನುವಾರ ಪಕ್ಷದ ಕಚೇರಿಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಮಂಗಳವಾರ ಬೆಳ್ಳಿಗೆ11 ಘಂಟೆಗೆ ಸಮಾವೇಶ ಆಯೋಜಿಸಲಾಗಿದೆ. ಫೇಜ ಪ್ರಮುಖ, ಘಟಕ ಪ್ರಮುಖ ಸೇರಿದಂತೆ ಪಕ್ಷದ ಜವಾಬ್ದಾರಿ ಹೊತ್ತ ಅಂದಾಜು 8 ಸಾವಿರ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು. ಪಕ್ಷ ಸಂಘಟನೆ ಹಾಗೂ ಮುಂದಿನ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಪುನಃ ಅಧಿಕಾರ ತರುವ ಬಗ್ಗೆ ರಾಜ್ಯ ಅಧ್ಯಕ್ಷರು ಪಕ್ಷದ ಪ್ರಮುಖರ ಜೊತೆ ಚರ್ಚೆ ನಡೆಸಲಿದ್ದು, ಪಕ್ಷದ ಜವಾಬ್ದಾರಿ ಹೊತ್ತ ಎಲ್ಲಾ ಪ್ರಮುಖರು ಕಡ್ಡಾಯವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಬಿಜೆಪಿ ಮುಖಂಡ ನ್ಯಾಯವಾದಿ ರಾಜೇಶ ನಾಯ್ಕ ಮಾತನಾಡಿದರು. ಕಾರ್ಯದರ್ಶಿ ಮೋಹನ ನಾಯ್ಕ, ಪ್ರಮುಖರಾದ ಮಹೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ ಮಂಜುನಾಥ ನಾಯ್ಕ, ಸ್ಮೀತಾ ಹಾಗೂ ಶೋಭಾ ಖಾರ್ವಿ ಇದ್ದರು.

error: