ಭಟ್ಕಳ; ತೆಂಗಿನಗುAಡಿ ಬಂದರ ಸಮೀಪವಿರುವ ಆಲದ ಮರದಲ್ಲಿ ವ್ಯಕ್ತಿಯೋರ್ವರ ಮೃತ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು .ಇದು ಅನುಮಾನಾಸ್ಪದ ಸಾವು ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.
ಮೃತ ವ್ಯಕ್ತಿ ಲಕ್ಷ್ಮಣ ನಾರಾಯಣ ನಾಯ್ಕ (40)ಇಲ್ಲಿನ ತೆಂಗಿನಗುAಡಿ ಹೆಬಳೆ ನಿವಾಸಿ ಆಟೋ ಚಾಲಕ ಎಂದು ತಿಳಿದು ಬಂದಿದೆ. ಈತ ಬುಧವಾರ ರಾತ್ರಿ 8 ಗಂಟೆಗೆ ತನ್ನ ಅಟೋ ತೆಗೆದುಕೊಂಡು ಮನೆಯಿಂದ ಹೋಗಿದ್ದು ರಾತ್ರಿ ಮರಳಿ ಮನೆಗೆ ಬಂದಿರುವುದಿಲ್ಲ. ನಂತರ ಗುರುವಾರ ಬೆಳ್ಳಿಗ್ಗೆ ದಯಾನಂದ ವೆಂಕಟ್ರಮಣ ನಾಯ್ಕ ಎನ್ನುವವರು ಮೃತನ ಸಹೋದರ ಕೃಷ್ಣ ನಾಯ್ಕರಿಗೆ ಕರೆ ಮಾಡಿ ನಿಮ್ಮ ಸಹೋದರ ಲಕ್ಷ್ಮಣ ತೆಂಗಿನಗುAಡಿ ಬಂದರಿನಲ್ಲಿ ಇರುವ ಆಲದ ಮರಕ್ಕೆ ನೇಣು ಹಾಕಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ ನಂತರ ಕೂಡಲೆ ಸ್ಥಳಕ್ಕೆ ಹೋಗಿ ನೋಡಿದರೆ ಲಕ್ಷ್ಮಣ ನಾಯ್ಕ ತೆಂಗಿನಗುAಡಿ ಬಂದರಿನಲ್ಲಿ ಇರುವ ಆಲದ ಮರದ ಟೊಂಗೆಗೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕುತ್ತಿಗೆಗೆ ನೇಣು ಹಾಕಿ ಸಾವನ್ನಪ್ಪಿದ್ದಾರೆ.ಆದರೆ ಈ ಸಾವಿನಲ್ಲಿ ಸಂಶಯವಿರುವ ಬಗ್ಗೆ ಮೃತನ ಸಹೋದರ ಕೃಷ್ಣ ನಾಯ್ಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪಿ.ಎಸ್.ಐ ಮಯೂರ ಪಟ್ಟಣಶೆಟ್ಟಿ ತನಿಖೆ ಕೈಗೊಂಡಿದ್ದಾರೆ
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.