May 6, 2024

Bhavana Tv

Its Your Channel

ಹೆಸ್ಕಾಂ ನಿಂದ ಮಂಜುನಾಥ್ ಗುನಗಾರಿಗೆ ಸನ್ಮಾನ, ಬೀಳ್ಕೊಡುಗೆ

ಹೊನ್ನಾವರ ಹೆಸ್ಕಾಂ ಉಪವಿಭಾಗದ ಕಂದಾಯ ಶಾಖೆಯಲ್ಲಿ ಹಿರಿಯ ಸಹಾಯಕರಾಗಿ 36 ವರ್ಷ ಸುದೀರ್ಘ ಸೇವೆ ಸಲ್ಲಿಸಿರುವ ಶ್ರೀ ಮಂಜುನಾಥ ಗುನಗಾರಿಗೆ ವಯೋ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ಗುತ್ತಿಗೆದಾರರು ಸೇರಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸ. ಕಾ. ಇಂಜಿನಿಯರ್ ರಾಮಕೃಷ್ಣ ಭಟ್ ಅಧ್ಯಕತೆ ವಹಿಸಿ ಅವರ ನಿವೃತ್ತಿ ಜೀವನ ಸುಖಮಯವಾಗಲೆಂದು ಶುಭ ಹಾರೈಸಿದರು. ಸಹಾಯಕ ಇಂಜಿನಿಯರ್ ಸತೀಶ್, ಸಹಾಯಕ ಲೆಕ್ಕಧಿಕಾರಿಗಳಾದ ಮಂಜುನಾಥ ಹೆಗ್ಡೆ, ನವ್ಯಶೀ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಎಸ್ ವಿ ನಾಯ್ಕ್, ಪಿಂಚಣಿದಾರರ ಸಂಘದ ಡಿ. ಡಿ. ಮಡಿವಾಳ ಮಾತನಾಡಿದರು. ಮಂಜುನಾಥ ಗುನಗರು ತಮ್ಮ ಸೇವಾ ಅವಧಿಯ ನೆನಪನ್ನು ಮತ್ತು ಸಹಕಾರ ನೀಡಿದ ಎಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ವಿಭಾಗ ಕಚೇರಿ, ಉಪ ವಿಭಾಗದ ಸಿಬ್ಬಂದಿಗಳು, ಗುತ್ತಿಗೆದಾರರು ಹಾಜರಿದ್ದರು. ನೌಕರ ಸಂಘದ ಅಧ್ಯಕ್ಷರಾದ ಗಜಾನನ ನಾಯ್ಕ್ ನಿರ್ವಹಿಸಿದರು, ಅಂತೋನಿ ಫರ್ನಾಂಡಿಸ್ ವಂದಿಸಿದರು.

error: