May 4, 2024

Bhavana Tv

Its Your Channel

ಲಯನ್ಸ್ ಕ್ಲಬ್ ಕುಮಟಾ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ.

ಕುಮಟಾ: ಕುಮಟಾ ಅಳ್ವೆಕೋಡಿ ನಿರ್ಮಲ ಕಾಮತ್ ಪ್ರೌಢಶಾಲೆಯಲ್ಲಿ ಲೈನ್ಸ್ ಕ್ಲಬ್ ಕುಮಟಾ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಹಲಸು, ಸೀತಾ ಅಶೋಕ, ಕದಂಬ, ಮಹಾಗನಿ, ಹಲಸು ಇನ್ನಿತರ ಗಿಡಗಳನ್ನು ಶಾಲೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕುಮಟಾದ ಅಧ್ಯಕ್ಷೆ ವಿದ್ಯಾ ಶೇಟ್, ಕಾರ್ಯದರ್ಶಿ ಡಾ.ನಾಗರಾಜ ಭಟ್, ಡಾ. ಗಿರೀಶ್ ಕುಚಿನಾಡ್, ಎಂ.ಎA ಹೆಗ್ಡೆ, ಶಾಲಾ ಮುಖ್ಯಾಧ್ಯಾಪಕರಾದ ಎಸ್. ಟಿ ಪಟಗಾರ, ಅಕ್ಷಯ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ, ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಒಟ್ಟಿಗೆ, ವನ ಮಹೋತ್ಸವದ ಉದ್ದೇಶ, ಹಸಿರಿನ ಪ್ರಾಮುಖ್ಯತೆ, ವಾತಾವರಣದ ಶುದ್ಧತೆ ಇನ್ನಿತರ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಯಿತು.

error: