ಶಿರಸಿ: ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ರಾಷ್ಟçಮಟ್ಟದ ತರಬೇತಿದಾರ ಸೈನಿಕ ಕಾಶಿನಾಥ ನಾಯ್ಕ ಅವರಿಗೆ ಜಿಲ್ಲಾ ಯೋಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಶಿರಸಿ ಶೈಕ್ಷಣಿಕ ಶಿಕ್ಷಣ ಇಲಾಖೆ ಗಂಭೀರ ಸ್ವರೂಪದ ಅಪಮಾನ ಮಾಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ಇದಕ್ಕೆ ಕ್ರೀಡಾಭಿಮಾನಿಗಳ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕಾಶಿನಾಥ ನಾಯ್ಕ ಅವರ ವಿಶೇಷ ಆಸಕ್ತಿಯಿಂದ ಶಿರಸಿಯ ಶ್ರೀ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ ೨೫ ರಂದು ಒಂದು ದಿನದ ದೈಹಿಕ ಶಿಕ್ಷಕರಿಗೆ ಕ್ರೀಡಾ ತರಬೇತಿ ಆಯೋಜಿಸಲಾಗಿತ್ತು. ಕ್ರೀಡಾ ತರಬೇತಿಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಿಂದ ಜರುಗಿಸಲಾಗಿತ್ತು.
ಜಿಲ್ಲೆಯಲ್ಲಿ ಪ್ರತಿಭಾವಂತ ಯುವ ಕ್ರೀಡಾ ಪಟುವಿಗೆ ಉತ್ತೇಜಿಸುವ ಹಾಗೂ ಹೊಸ ಕ್ರೀಡಾ ತಂತ್ರಜ್ಞಾನ ದೈಹಿಕ ಶಿಕ್ಷಕರಿಗೆ ನೀಡುವ ಉದ್ದೇಶದಿಂದ ಪ್ರಾಯೋಗಿಕ ಹಾಗೂ ಸಿದ್ದಾಂತ ಪದ್ದತಿಯಲ್ಲಿ ಪ್ರಥಮ ಹಂತವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಕರಿಗೆ ಕ್ರೀಡಾ ತರಭೇತಿಯನ್ನು ಸ್ವ ಇಚ್ಛಾಶಕ್ತಿಯಿಂದ, ಉಚಿತವಾಗಿ ಇತ್ತೀಚಿನ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರ ಪ್ರಾಥಮಿಕ ಹಂತದ ತರಬೇತಿದಾರ, ಕಾಮನ್ ವೆಲ್ತ ಕಂಚಿನ ಪದಕ ವಿಜೇತ ಹಾಗೂ ಪ್ರಸಕ್ತ ಸೈನಿಕ ಕ್ರೀಡಾ ತರಬೇತಿದಾರರಾದ ಕಾಶಿನಾಥ ಅವರ ಮುತುವರ್ಜಿಯಲ್ಲಿ ತರಬೇತಿ ಶಿಬಿರ ಸಂಘಟಿಸಲ್ಪಟ್ಟಿತ್ತು.
ಆದರೆ, ಯುವಜನ ಸೇವಾ ಇಲಾಖೆ ಹಾಗೂ ಶೈಕ್ಷಣಿಕ ಇಲಾಖೆಯು ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ತರಬೇತಿ ಹಾಜರಾದ ದೈಹಿಕ ಶಿಕ್ಷಕರಿಗೆ ನೀಡಿದ ಪ್ರಮಾಣ ಪತ್ರದಲ್ಲಿ ಔಚಿತ್ಯಕ್ಕೂ ತರಬೇತಿ ನೀಡಿದ ಕಾಶಿನಾಥ ನಾಯ್ಕ ಅವರ ಹೆಸರನ್ನು ಪ್ರಸ್ತಾಪಿಸದೇ, ಉಲ್ಲೇಖಿಸಿದೇ ಹಾಗೂ ಪ್ರಮಾಣ ಪತ್ರದಲ್ಲಿ ಸಹಿಯನ್ನು ದಾಖಲಿಸದೇ ಪ್ರಮಾಣ ಪತ್ರ ನೀಡಿರುವುದು ಪ್ರಮಾದಕ್ಕೆ ಕಾರಣವಾಗಿದೆ.
ಕ್ರೀಡಾಸಕ್ತರ ಆಕ್ರೋಶ:
ಅಧಿಕಾರಿಯುಕ್ತ ಅಧಿಕಾರಿಳಿಂದ ಕಾಶಿನಾಥ ನಾಯ್ಕ ಅವರಿಗೆ ಉಂಟಾಗಿರುವ ಅವಮಾನ ಸಾರ್ವಜನಿಕವಾಗಿ ಕ್ರೀಡಾಸಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ಸ್ಪಂದನಾ ಸ್ಪೋರ್ಟ್ಸ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಏ ರವೀಂದ್ರ ನಾಯ್ಕ ಇಲಾಖೆಯ ನಿರ್ಲಕ್ಷö್ಯಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ