ಭಟ್ಕಳ: ತಾಲೂಕಿನ ಡೀಪ್ ಸೀ ಬೋಟ್ ಚಾಲಕರ ಸಂಘದ ವತಿಯಿಂದ ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯಾಧ್ಯಕ್ಷ ರಾಮಾ ಮೊಗೇರ ಅವರನ್ನು ಇಲ್ಲಿನ ವೆಂಕಟಾಪರ ಶ್ರೀ ಶ್ರೀನಿವಾಸ ಸಭಾಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಮಾ ಮೊಗೇರ ಮಾತನಾಡಿದರು. ಡೀಪ್ ಸೀ ಬೋಟ್ ಚಾಲಕರ ಸಂಘದ ಅಧ್ಯಕ್ಷ ಸದಾನಂದ ಮೊಗೇರ ಸಣಬಾವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಉಪಾಧ್ಯಕ್ಷ ಶಂಕರ ಮೊಗೇರ, ಶ್ರೀಧರ ಮೊಗೇರ, ಮಾದೇವ ಮೊಗೇರ, ಮೋಹನ ಮೊಗೇರ, ಹನುಮಂತ ಮೊಗೇರ, ಸುರೇಶ ಜನ್ಮಾ ಮೊಗೇರ, ರಾಮಾ ಸಪ್ಪುಮನೆ, ಗಣಪತಿ ಮೊಗೇರ ಕರಿಕಲ್, ಉಮೇಶ ಮೊಗೇರ ಮುಂಡಳ್ಳಿ, ಬಾಬು ಮೊಗೇರ ಬೈಲೂರು, ಕುಮಾರ ಮೊಗೇರ ಮಾವಳ್ಳಿ, ಈಶ್ವರ ಕೈಕಿಣಿ, ಜನ್ನಾ ಯಂಕಜ್ಜಿಮನೆ, ನಾರಾಯಣ ಮುಂಡಳ್ಳಿ, ಲೋಕೇಶ ಬೆಳ್ಳಿ ಉಪಸ್ಥಿತರಿದ್ದರು. ಗೋಪಾಲ ಸಣ್ಣಯ್ಯನಮನೆ ಸ್ವಾಗತಿಸಿ, ನಿರೂಪಿಸಿದರು.
More Stories
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ